Kannada NewsKarnataka NewsLatest

*ಬಾವಿಗೆ ಬಿದ್ದ ತಂಗಿಯನ್ನು ರಕ್ಷಿಸಲು ಹೋದ ಅಣ್ಣನೂ ನೀರುಪಾಲು*

ಪ್ರಗತಿವಾಹಿನಿ ಸುದ್ದಿ: ಬಾವಿಗೆ ಬಿದ್ದು ಅಣ್ಣ-ತಂಗಿ ಸಾವನ್ನಪ್ಪಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪಟ್ಟಪಳ್ಳಿ ಗ್ರಾಮದಲ್ಲಿ ನಡೆದಿದೆ.

ಬಾವಿಗೆ ಬಿದ್ದ ತಂಗಿಯನ್ನು ರಕ್ಷಿಸಲು ಹೋಗಿದ್ದ ಅಣ್ಣ ಮೇಲೆ ಬರಲು ಸಾಧ್ಯವಾಗದೇ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

Home add -Advt

ನಂದಿನಿ (18) ಹಾಗೂ ಅಣ್ಣ ಸಂದೀಪ್ (21) ಮೃತರು. ತಂಗಿ ನಂದಿನಿ ಮನೆ ಬಳಿ ಬಾವಿಗೆ ಹಾರಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಬಾವಿಗೆ ಇಳಿದು ಆಕೆಯನ್ನು ರಕ್ಷಿಸಿಸಲು ಅಣ್ಣ ಮುಂದಾಗಿದ್ದಾನೆ. ಈ ವೇಳೆ ಮೇಲೆ ಬರಲು ಸಾಧ್ಯವಾಗದೇ ಅಣ್ಣ-ತಂಗಿ ಇಬ್ಬರೂ ಬಾವಿಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button