Belagavi NewsBelgaum NewsKannada NewsKarnataka News
*ಕೆಎಲ್ಎಸ್ ಜಿಆಯ್ ಟಿಯಲ್ಲಿ ಕ್ಯಾರಿಯೋಕೆ ಕ್ಲಬ್ ಉದ್ಘಾಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬದಲಾಗುತ್ತಿರುವ ಜೀವನ ಶೈಲಿಯಲ್ಲಿ, ಕೆಲಸದ ಒತ್ತಡ ನಿವಾರಿಸಲು ಕ್ಯಾರಿಯೋಕೆ ಮ್ಯೂಸಿಕ್ ಕ್ಲಬ್ ಅನ್ನು ಕೆಎಲ್ಎಸ್ ಜಿಆಯ್ ಟಿಯಲ್ಲಿ ಜುಲೈ 27 ರಂದು ಸಿಲ್ವರ್ ಜುಬಿಲಿ ಸಂಭಾಂಗಣದಲ್ಲಿ, ಪ್ರಾಚಾರ್ಯರಾದ ಡಾ . ಎಂ ಎಸ್ ಪಾಟೀಲ್ ಉದ್ಘಾಟನೆ ಮಾಡಿದರು.
ಸುಮಾರು 25 ಕ್ಕೂ ಹೆಚ್ಚಿನ ಕನ್ನಡ, ಮರಾಠಿ, ಹಿಂದಿ ಚಿತ್ರಗೀತೆ ಹಾಗೂ ಭಾವಗೀತೆ ಗಳನ್ನು ಸಿಬ್ಬಂದಿ ಹಾಗೂ ಪ್ರಾಧ್ಯಾಪಕರು ಪ್ರಸ್ತುತ ಪಡಿಸಿದರು. ಪ್ರೊ. ಹಂಪಿಹೊಳಿ ಹಾಗೂ ಉಪೇಂದ್ರ ಜೋಶಿ ಈ ಕಾರ್ಯಕ್ರ್ರಮದ ಮುಖ್ಯ ರೂವಾರಿಯಾಗಿ ಕಾರ್ಯ ನಿರ್ವಹಿಸಿದರು.