Latest

ಕಾರು ಕಳ್ಳತನ; ಮಾಲೀಕನನ್ನೇ ಬಂಧಿಸಿದ ಪೊಲೀಸರು

ಪ್ರಗತಿವಾಹಿನಿ ಸುದ್ದಿ; ತುಮಕೂರು: ಇನ್ನೋವಾ ಕಾರು ಕಳ್ಳತನವಾಗಿದೆ ಎಂದು ದೂರು ನೀಡಿದ್ದ ಮಾಲೀಕನೇ ಪೊಲೀಸರ ಅತಿಥಿಯಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಆರೋಪಿಯನ್ನು ಮಡಕಶಿಲಾ ಮೂಲದ ದೊಡ್ಡೇಗೌಡ ಎಂದು ಗುರುತಿಸಲಾಗಿದೆ. ಕಾರು ವಿಮೆ ಪಡೆಯುವ ಉದ್ದೇಶದಿಂದ ತನ್ನ ಇನ್ನೋವಾ ಕಾರು ಕಳುವಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಪಾವಗಡ ರಸ್ತೆ ಬಳಿ ಮೂವರು ದುಷ್ಕರ್ಮಿಗಳು ಕಾರು ಅಡ್ಡಗಟ್ಟಿ ತನ್ನ ಮೇಲೆ ಹಲ್ಲೆ ನಡೆಸಿ ಕಾರಿನೊಂದಿಗೆ ಪರಾರಿಯಾಗಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದ.

Home add -Advt

ಆತನ ಚಲನವಲನಗಳ ಮೇಲೆ ನಿಗಾ ವಹಿಸಿದ ಪೊಲೀಸರಿಗೆ ಕಾರಿನ ಮಾಲೀಕನ ನಾಟಕ ಗೊತ್ತಾಗಿದೆ. ಇದೀಗ ಆರೋಪಿ ದೊಡ್ಡೇಗೌಡನನ್ನು ಬಂಧಿಸಿದ್ದಾರೆ.

Related Articles

Back to top button