Belagavi NewsBelgaum NewsKannada NewsKarnataka NewsNationalPolitics

*ವಿವಿಧೆಡೆ ಮಹಾಪ್ರಸಾದ ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಸೋಮವಾರ ವಿವಿಧೆಡೆ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಭಕ್ತರಿಗೆ ಮಹಾಪ್ರಸಾದ ವಿತರಿಸಿದರು. 

ಹಿಂಡಲಗಾ ಜಯನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪಲ್ಲಕ್ಕಿ ಪೂಜೆಯಲ್ಲಿ ಪಾಲ್ಗೊಂಡು, ಮಹಾ ಪ್ರಸಾದ ಸೇವೆಗೆ ಸಚಿವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಭಕ್ತರಿಗೆ ಪ್ರಸಾದವನ್ನು ಉಣಬಡಿಸಿ, ಬಳಿಕ ಅವರೊಂದಿಗೆ ಕುಳಿತು ಪ್ರಸಾದ ಸ್ವೀಕರಿಸಿದರು. 

Home add -Advt

ನಂತರ ಸಹ್ಯಾದ್ರಿ ನಗರದ ಶಿವಲಿಂಗೇಶ್ವರ ಕಾಲೋನಿಯ ಶ್ರೀ ಆದಿ ಶಿವಲಿಂಗೇಶ್ವರ ದೇವಸ್ಥಾನದಲ್ಲಿ (ಶಿವಾಲಯ) ಹಮ್ಮಿಕೊಳ್ಳಲಾಗಿದ್ದ ಮಹಾಪ್ರಸಾದ ಸೇವೆಗೆ ಸಹ ಚಾಲನೆ ನೀಡಿ, ಭಕ್ತಾಧಿಗಳಿಗೆ ಪ್ರಸಾದ ಬಡಿಸಿದರು.

Related Articles

Back to top button