Kannada NewsKarnataka News

ಗೋವಾ ಮೂಲದ ಕಾರು ಡಿಕ್ಕಿ: ಯುವಕ ಬಲಿ

ಗೋವಾ ಮೂಲದ ಕಾರು ಡಿಕ್ಕಿ: ಯುವಕ ಬಲಿ

ಪ್ರಗತಿವಾಹಿನಿ ಸುದ್ದಿ, ಅಗಸಗಿ : ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆ ಎಚ್ ಗ್ರಾಮದ ರಾಮದೇವ ಗಲ್ಲಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ಡಿಕ್ಕಿ ಹೊಡೆದು ಪಾದಚಾರಿಯೊಬ್ಬ ಸ್ಥಳದಲ್ಲಿ ಸಾವನಪ್ಪಿದ್ದಾನೆ.
ಬಿಹಾರ ಮೂಲದ ಅಶೋಕ ಶ್ರೀರಾಮ ರಾಜಬಾರ (೨೫) ಮೃತ ಯುವಕ. ಇವರು  ಪೇಂಟಿಂಗ್ ಕೆಲಸ ಮಾಡುತ್ತಿದ್ದು, ಕಂಗ್ರಾಳಿ ಕೆ ಎಚ್ ಗ್ರಾಮದಲ್ಲಿ ವಾಸವಾಗಿದ್ದರು.
ಬುಧವಾರ ಈ ಘಟನೆ ನಡೆದಿದೆ. ಅಪಘಾತ ಸಂಭವಿಸುತ್ತಿದ್ದಂತೆ ಗೋವಾ ನೊಂದಾಯಿತ ಕಾರು ಚಾಲಕ ಪರಾರಿಯಾಗಿದ್ದು, ಪೋಲೀಸರು ಶೋಧ ನಡೆಸಿದ್ದಾರೆ. ಎ ಪಿ ಎಮ್ ಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button