Kannada NewsLatestNational
*ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಿದ ಇಬ್ಬರು ಸಂಸದರು*
ಪ್ರಗತಿವಾಹಿನಿ ಸುದ್ದಿ: ಚುನಾವಣೆ ಹೊತ್ತಲ್ಲಿ ಬಿಜೆಪಿಗೆ ಮತ್ತೊಂದ ಶಾಕ್ ಎದುರಾಗಿದೆ. ಲೋಕಸಭಾ ಚುನಾವಣೆ ಸ್ಪರ್ಧೆ ಮಾಡಲು ಬಿಜೆಪಿ ಟಿಕೆಟ್ ನೀಡಲು ನಿರಾಕರಣೆ ಮಾಡಿರುವ ಹಿನ್ನೆಲೆ ಇಬ್ಬರು ಸಂಸದರು ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.
ಬಿಹಾರದ ಮುಜಾಫರ್ಪುರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಅಜಯ್ ಕುಮಾರ ನಿಶಾದ ಅವರನ್ನು ಬಿಟ್ಟು ರಾಜ್ ಭೂಷಣ ನಿಶಾದ ಅವರನ್ನು ಬಿಜೆಪಿ ಟಕೆಟ್ ನೀಡಿರುವ ಹಿನ್ನಲೆ ಹಾಲಿ ಬಿಜೆಪಿ ಸಂಸದ ಅಜಯ್ ಕುಮಾರ ನಿಶಾದ ಅವರು ಕಾಂಗ್ರೆಸ್ ಸೇರಿದ್ದಾರೆ. ಇವರ ಜೊತೆ ಬಿಹಾರದ ಮತ್ತೊಬ್ಬ ಸಂಸದ ಛೇದಿ ಪಾಸ್ವಾನ ಕೂಡಾ ಬಿಹಾರ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ದೆಹಲಿ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷ ಸೇರಿದ್ದಾರೆ.