Kannada NewsKarnataka News

JDS ಸೇರಿದ ಬೆಳಗಾವಿ ಜಿಲ್ಲೆಯ ಮತ್ತೂ ಇಬ್ಬರು ಟಿಕೆಟ್ ಆಕಾಂಕ್ಷಿಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಪಕ್ಷಾಂತರ ಪರ್ವ ಮುಂದುವರಿದಿದೆ. ಸೋಮವಾರ ಇಬ್ಬರು ಪ್ರಮುಖ ಟಿಕೆಟ್ ಆಕಾಂಕ್ಷಿಗಳು ಜೆಡಿಎಸ್ ಸೇರಿದ್ದಾರೆ.

ಯಮಕನಮರಡಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾರುತಿ ಅಷ್ಟಗಿ ಮತ್ತು ಸವದತ್ತಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಪಂಚನಗೌಡ ದ್ಯಾಮನಗೌಡರ್ ಜೆಡಿಎಸ್ ಸೇರಿದ್ದಾರೆ. ಸವದತ್ತಿಯಲ್ಲಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಈ ಇಬ್ಬರು ಪಕ್ಷ ಸೇರಿದರು.

ಮಾರುತಿ ಅಷ್ಟಗಿ ಯಮಕನಮರಡಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಪಂಚನಗೌಡ ದ್ಯಾಮನಗೌಡರ್ ಜೆಡಿಎಸ್ ಅಭ್ಯರ್ಥಿ ಸೌರವ್ ಚೋಪ್ರಾಗೆ ಬೆಂಬಲ ಘೋಷಿಸಿದ್ದಾರೆ.

https://pragati.taskdun.com/s-a-ramadasaravinda-limbavalibjp-ticketmiss/

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button