Belagavi NewsBelgaum NewsKannada NewsKarnataka News

ಶ್ರೀ ಜಯತೀರ್ಥರ ಆರಾಧನೆಯ ನಿಮಿತ್ತ ವಿವಿಧ ಸ್ಪರ್ಧೆಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಶ್ವಮಧ್ವ ಮಹಾಪರಿಷತ್ ಬೆಳಗಾವಿ ಘಟಕದ ವತಿಯಿಂದ ಶ್ರೀ ಜಯತೀರ್ಥರ ಆರಾಧನೆ ನಿಮಿತ್ತವಾಗಿ ಜುಲೈ 21 ರಂದು  ಶ್ರೀ ಸತ್ಯ ಪ್ರಮೋದತೀರ್ಥ ಸಭಾಗ್ರಹ ರಾಣಿ ಚೆನ್ನಮ್ಮ ನಗರದಲ್ಲಿ ಸಾಯಂಕಾಲ 4 ರಿಂದ 6 ಗಂಟೆವರೆಗೆ 8 ರಿಂದ 15 ವರ್ಷದ ಮಕ್ಕಳಿಗಾಗಿ ಶ್ರೀ ಜಯತೀರ್ಥರ ಚಿತ್ರಕಲೆ ಸ್ಪರ್ಧೆ ಹಾಗೂ ಅವರ ಜೀವನ ಚರಿತ್ರೆ ಕುರಿತು ರಸಪ್ರಶ್ನೆ ಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. 

ಭಜನಾ ಮಂಡಳಿಗಳು/ ಮಹಿಳೆಯರಿಗಾಗಿ ಶ್ರೀ ಜಯತೀರ್ಥರ ಕುರಿತು ರಂಗೋಲಿ ಬಿಡಿಸುವ ಸ್ಪರ್ಧೆಯನ್ನು ಕೂಡಾ ಏರ್ಪಡಿಸಲಾಗಿದೆ.  ಆದ್ದರಿಂದ ಎಲ್ಲರೂ ತಮ್ಮ ಮಕ್ಕಳನ್ನು ಪ್ರೋತ್ಸಾಹಿಸಿ ಈ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿ ಆರಾಧನೆಗೂ ಕೂಡ ಕರೆದುಕೊಂಡು ಬಂದು ಶ್ರೀ ಜಯತೀರ್ಥರ ಅನುಗ್ರಹ ಹಾಗೂ ಗುರುಗಳಾದ ಶ್ರೀ ಸತ್ಯಾತ್ಮತೀರ್ಥರ ವಿಶೇಷ ಆಶೀರ್ವಾದ ಪಡೆದುಕೊಂಡು ಧನ್ಯರಾಗೋಣ.

ಜುಲೈ 26 ರಂದು ಶುಕ್ರವಾರ ಶ್ರೀ ಜಯತೀರ್ಥರ ಆರಾಧನೆಯ ಸಂದರ್ಭದಲ್ಲಿ ಬಹುಮಾನಗಳನ್ನು ಕೂಡ ವಿತರಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವವರು ಇವರನ್ನು ಸಂಪರ್ಕಿಸಿ. ರಾಧಾ ಗೊಗ್ಗಿ – 9448706846 ಹಾಗೂ ಸುನಿತಾ ಅಂಬೇಕರ- 9449308333

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button