Latest

ಕರ್ನಾಟಕದಲ್ಲಿ ಕಾಳ್ಗಿಚ್ಚು ಪ್ರಕರಣ; ಬೆಚ್ಚಿಬೀಳಿಸುವ ಅಂಕಿಅಂಶ ಹೊರಹಾಕಿದ ಅರಣ್ಯ ಇಲಾಖೆ

395 / 5,000

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಬೇಸಿಗೆ ತೀವ್ರತೆ ಪಡೆಯುತ್ತ ಸಾಗಿದೆ. ಈ ಹಂತದಲ್ಲಿ ಅರಣ್ಯ ಪ್ರದೇಶಗಳಲ್ಲಿ ಕಾಳ್ಗಿಚ್ಚು ಉದ್ಭವಿಸುವ ಸಂಭವಗಳು ಅತಿ ಹೆಚ್ಚು. ಆದರೆ ಕರ್ನಾಟಕ ಅರಣ್ಯ ಇಲಾಖೆ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶವೊಂದು ಬೆಚ್ಚಿಬೀಳಿಸುವಂತಿದೆ.

Home add -Advt

ರಾಜ್ಯ ಅರಣ್ಯ ಅರಣ್ಯ ಇಲಾಖೆ ಹಂಚಿಕೊಂಡಿರುವ ಅಂಕಿಅಂಶಗಳ ಪ್ರಕಾರ ಫೆಬ್ರವರಿ 15 ರಿಂದ ಕರ್ನಾಟಕದ ಅರಣ್ಯಗಳಲ್ಲಿ 2,042 ಕ್ಕೂ ಹೆಚ್ಚು ಕಾಳ್ಗಿಚ್ಚು ಘಟನೆಗಳು ದಾಖಲಾಗಿವೆ. ಇವುಗಳಲ್ಲಿ 627 ದೊಡ್ಡ ಪ್ರಮಾಣದ ಕಾಡ್ಗಿಚ್ಚುಗಳಾಗಿವೆ.

ಇತ್ತೀಚಿನ ವರ್ಷಗಳಲ್ಲಿ ಅರಣ್ಯ ನಾಶದ ಪ್ರಮಾಣ ಹೆಚ್ಚಿದ್ದು ಇದರಲ್ಲಿ ಕಾಳ್ಗಿಚ್ಚುಗಳ ಕೊಡುಗೆಯೂ ಗಣನೀಯವಾಗಿದೆ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅನೇಕ ಜೀವವೈವಿಧ್ಯಗಳನ್ನು ಹೊಂದಿರುವ ಪ್ರಪಂಚದ ಅಪರೂಪದ ಅರಣ್ಯಗಳು ರಾಜ್ಯದಲ್ಲಿವೆ. ಆದರೆ ಲೂಟಿ, ಅರಣ್ಯಭೂಮಿ ಪರಿವರ್ತನೆ ಸೇರಿದಂತೆ ಹಲವು ಕಾರಣಗಳಿಂದ ದಟ್ಟಾರಣ್ಯಗಳ ಪ್ರಮಾಣ ಕರಗುತ್ತಲೇ ಸಾಗಿದೆ. ಈ ಮಧ್ಯೆ 15- 20 ದಿನಗಳಲ್ಲಿ ಸಾವಿರಾರು ಕಾಳ್ಗಿಚ್ಚು ಪ್ರಕರಣಗಳು ಇನ್ನಷ್ಟು ಆತಂಕ ಮೂಡಿಸಿವೆ.

“ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ವಿಳಂಬವಾಗಿದೆ. ಈಗಾಗಲೇ ಭಾರಿ ನಷ್ಟವಾಗಿದೆ” ಎಂದು ಜಾತ್ಯತೀತ ಜನತಾ ದಳ ಟ್ವೀಟ್‌ನಲ್ಲಿ ತಿಳಿಸಿದೆ.

https://pragati.taskdun.com/apmc-police-arrest-2-thives/
https://pragati.taskdun.com/again-4-days-siddaramaiah-belgaum-tour/

https://pragati.taskdun.com/bjp-mlc-puttannacongress-joind-k-shivakumar/

Related Articles

Back to top button