Latest

ಡಿ.3ರಂದು ಕಾರಂಜಿಮಠದಲ್ಲಿ220ನೇ ಶಿವಾನುಭವ ಗೋಷ್ಠಿ

 

 

Home add -Advt

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಲ್ಲಿಯ ಶಿವಬಸವ ನಗರದ ಕಾರಂಜಿಮಠದ ಶಿವಾನುಭವ ಮಂಟಪದಲ್ಲಿ ಸೋಮವಾರ ಸಂಜೆ 6 ಗಂಟೆಗೆ 220ನೇ ಶಿವಾನುಭವ ಗೋಷ್ಠಿ ನಡೆಯಲಿದೆ.
ಇದೇ ವೇಳೆ ತ್ರಿವಿಧ ದಾಸೋಹಮೂರ್ತಿ ನಾಗನೂರು ರುದ್ರಾಕ್ಷಿಮಠದ ಡಾ. ಶಿವಬಸವ ಮಹಾಸ್ವಾಮಿಗಳ 129ನೇ ಜಯಂತಿ ಹಾಗೂ ಸನ್ಮಾನ ಸಮಾರಂಭ ನಡೆಯುವುದು.
ಕಾರ್ಯಕ್ರಮದ ಸಾನಿಧ್ಯವನ್ನು ಗುರುಸಿದ್ಧ ಮಹಾಸ್ವಾಮಿಗಳು ವಹಿಸುವರು ಅಧ್ಯಕ್ಷತೆಯನ್ನು ಬೆಳಗಾವಿ ಲಿಂಗಾಯತ ಸಂಘಟನೆಯ ಅಧ್ಯಕ್ಷ ಶಶಿಭೂಷಣ ಪಾಟೀಲ ವಹಿಸುವರು.
ನಾಗನೂರು ಶಿವಬಸವ ಮಹಾಸ್ವಾಮಿಗಳ ಸಮಾಜಸೇವೆ ಕುರಿತು ಶೇಗುಣಸಿ ವಿರಕ್ತಮಟದ ಶ್ರೀ ಮಹಾಂತ ದೇವರು ಉಪನ್ಯಾಸ ನೀಡುವರು. ಸಮ್ಮುಖವನ್ನು ಶ್ರೀ ಶಿವಯೋಗಿ ದೇವರು ವಹಿಸುವರು.
ಇದೇ ಸಂದರ್ಭದಲ್ಲಿ ಬೆಂಗಳೂರು ಅಖಿಲಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ ಪುರಸ್ಕೃತರಾದ ಶ್ರೀ ಪ್ರಕಾಶ ಗಿರಿಮಲ್ಲನವರನ್ನು ಸನ್ಮಾನಿಸಲಾಗುವುದು.
ಕಾರಂಜಿಮಠದ ಮಾತೃಮಂಡಳಿವರಿಂದ ಸಾಮೂಹಿಕ ಪ್ರಾರ್ಥನೆ ನಡೆಯುವುದು.

Related Articles

Back to top button