Latest

ಇಂದು ರಡ್ಡಿ ಸಮಾಜದಿಂದ ಬೆಳಗಾವಿಯಲ್ಲಿ ಪ್ರತಿಭಟನೆ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ರಡ್ಡಿ ಸಮಾಜದ ಮುಖಂಡರನ್ನು ಸೇರಿಸಿಕೊಳ್ಳದಿರುವುದನ್ನು ವಿರೋಧಿಸಿ ಬೆಳಗಾವಿ ರಡ್ಡಿ ಸಮಾಜದಿಂದ ಮಂಗಳವಾರ ಬೆಳಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

Home add -Advt

 

ಮಧ್ಯಾಹ್ನ 3.30ಕ್ಕೆ ನಗರದ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಸೇರುವ ಸಮಾಜದವರು ಅಲ್ಲಿಂದ ಚನ್ನಮ್ಮ ವೃತ್ತದ ಮೂಲಕ ಕಾಂಗ್ರೆಸ್ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಪ್ರತಿಭಟನೆ ನಡೆಸುವರು.

 

ರಡ್ಡಿ ಸಮಾಜದ ಎಚ್.ಕೆ.ಪಾಟೀಲ, ಎಸ್.ಆರ್.ಪಾಟೀಲ, ರಾಮಲಿಂಗ ರಡ್ಡಿ, ಬಸವರಾಜ ಹೊರಟ್ಟಿ ಅವರನ್ನು ಸಚಿವಸಂಪುಟದಿಂದ ಹೊರಗಿಡಲಾಗಿದೆ ಎನ್ನುವುದು ರಡ್ಡಿ ಸಮಾಜದ ಅಸಮಾಧಾನ.

Related Articles

Back to top button