National

*ಕೋರ್ಟ್ ನಲ್ಲಿಯೇ ಅಳಿಯನನ್ನು ಗುಂಡಿಟ್ಟು ಹತ್ಯೆಗೈದ ಮಾಜಿ ಎಐಜಿ*

ಪ್ರಗತಿವಾಹಿನಿ ಸುದ್ದಿ: ಐಆರ್ ಎಸ್ ಅಧಿಕಾರಿ ಅಳಿಯನನ್ನು ಮಾವ ಮಾಜಿ ಎಐಜಿ ಕೋರ್ಟ್ ಆವರಣದಲ್ಲಿಯೇ ಗುಂಡಿಟ್ಟು ಹತ್ಯೆಗೈದಿರುವ ಘಟನೆ ಪಂಜಾಬ್ ನ ಚಂಡೀಗಢ ಕೋರ್ಟ್ ನಲ್ಲಿ ನಡೆದಿದೆ.

ಮಾಜಿ ಎಐಜಿ ಅಲ್ವಿಂದರ್ ಸಿಂಗ್ ಸಿಧು, ಐಆರ್ ಎಸ್ ಅಧಿಕಾರಿಯಾಗಿದ್ದ ತನ್ನ ಅಳಿಯನನ್ನು ಚಂಡೀಗಢ ಜಿಲ್ಲಾ ಕೋರ್ಟ್ ಆವರಣದಲ್ಲಿಯೇ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

Home add -Advt

ಎರಡು ಕುಟುಂಬಗಳ ನಡುವಿನ ಕಲಹವೇ ಘಟನೆಗೆ ಕಾರಣ ಎನ್ನಲಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಎರಡೂ ಕುಟುಂಬಗಳ ಸದಸ್ಯರು ಇಂದು ಚಂಡೀಗಢ ಜಿಲ್ಲಾ ಕೋರ್ಟ್ ಗೆ ಹಾಜರಾಗಿದ್ದರು. ಈ ವೇಳೆ ಮಲ್ವಿಂದರ್ ಸಿಂಗ್ ಕೃಷಿ ಇಲಖೆಯಲ್ಲಿ ಐಆರ್ ಎಸ್ ಅಧಿಕಾರಿಯಾಗಿರುವ ತನ್ನ ಅಳಿಯನ ಮೇಲೆ ಫೈರಿಂಗ್ ಮಾಡಿದ್ದಾರೆ. ತಕ್ಷಣ ಪೊಲೀಸರು ಹಾಗೂ ವಕೀಲರು ಆರೋಪಿ ಮಲ್ವಿಂದರ್ ಸಿಂಗ್ ನನ್ನು ಕೋರ್ಟ್ ನ ರೂಮಿಗೆ ಎಳೆದೊಯ್ದು ಕೂಡಿಹಾಕಿ ಬಂಧಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಐಆರ್ ಎಸ್ ಅಧಿಕಾರಿಯನ್ನು ಆಸ್ಪತ್ರೆ ಸಾಗಿಸಲಾಗಿತ್ತು. ಆದರೆ ಆಸ್ಪತ್ರೆ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.


Related Articles

Back to top button