Latest

ಮೂವರು ಯುವಕರು ನೀರು ಪಾಲು

ಪ್ರಗತಿವಾಹಿನಿ ಸುದ್ದಿ, ಶಿರಸಿ:

ಪ್ರವಾಸಕ್ಕೆ ತೆರಳಿದ್ದ ಮೂರು ಜನ ಯುವಕರು ನೀರುಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬುರುಡೆ ಪಾಲ್ಸ್ ನಲ್ಲಿ ನಡೆದಿದೆ.

Home add -Advt

ಇಂದು ಮಧ್ಯಾನದ ವೇಳೆ ಜಲಪಾತಕ್ಕೆ ತೆರಳಿದ್ದ ಮೂವರು ಸೆಲ್ಫೀ ತೆಗೆಯುವ ವೇಳೆ ಜಾರಿ ಬಿದ್ದು ಸುಳಿಗೆ ಸಿಲುಕಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಶಿರಸಿಯ ಮುರಳಿ , ಸಿದ್ದಾಪುರದ ಅಭಿಷೇಕ್ ನಾಯ್ಕ, ಕೇರಳ ಮೂಲದ ಸಾಯಿ ಮೃತರು.

ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿದ್ದು ಸ್ಥಳೀಯರ ಸಹಾಯದಿಂದ ಶವವನ್ನು ಮೇಲಕ್ಕೆತ್ತಿದ್ದಾರೆ.

ಘಟನೆ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button