Kannada NewsKarnataka NewsLatest

ವಕೀಲ ರಾಜು ಹಂಜಿ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿರಿಯ ವಕೀಲ ರಾಜು ಕೆಂಪಣ್ಣ ಹಂಜಿ (51)  ಬುಧವಾರ ಬೆಳಗಿನಜಾವ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೆ ಬೆಳಗಿನಜಾವ 1 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು.

Home add -Advt

ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಮೂಲದವರಾದ ಅವರು ಸ್ವಗ್ರಾಮದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಪಡೆದು ಬೆಳಗಾವಿಯಲ್ಲಿ ಕಾನೂನು ಪದವಿ ಪಡೆದಿದ್ದರು. ಬೆಳಗಾವಿಯಲ್ಲೇ ವೃತ್ತಿ ಆರಂಭಿಸಿದ್ದ ಅವರು ಕಂಗ್ರಾಳಿ ಕೆ.ಎಚ್. ನಲ್ಲಿ ವಾಸವಾಗಿದ್ದರು.

ಅವರ ಸ್ವಗ್ರಾಮವಾದ ಹಿಡಕಲ್ ಡ್ಯಾಂ ನಲ್ಲಿ ಇಂದು ಅಂತ್ಯಸಂಸ್ಕಾರ ನೆರವೇರಲಿದೆ. ಅವರು ತಂದೆ, ತಾಯಿ, ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧುಬಳಗ ಅಗಲಿದ್ದಾರೆ.

ರಾಜು ಹಂಜಿ ಅವರ ನಿಧನಕ್ಕೆ ವಕಿಲರ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಯವರು, ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.

ಮಳಲಿ ಮಸೀದಿ ವಿವಾದ: VHP ಅರ್ಜಿ ಅಂಗೀಕಾರ

 

 

Related Articles

Back to top button