Karnataka News

ಟೆಂಪೊ ಬಸ್ ಡಿಕ್ಕಿ: 21 ಜನರಿಗೆ ಗಾಯ 

 ಪ್ರಗತಿ ವಾಹಿನಿ ಸುದ್ದಿ, ಮುರಡೇಶ್ವರ :    ಮುರಡೇಶ್ವರದ  ತೆರ್ನಮಕ್ಕಿ  ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪ್ರಯಾಣಿಕರ ಟೆಂಪೊಗೆ ಹಿಂಬದಿಯಿಂದ ಬಸ್ ಡಿಕ್ಕಿಯಾಗಿ 21 ಜನ ಗಾಯಗೊಂಡಿದ್ದಾರೆ.
  ಅನಂತವಾಡಿಯಿಂದ ಭಟ್ಕಳಕ್ಕೆ ತೆರಳುತ್ತಿದ್ದ ಟೆಂಪೊಗೆ ಮುರಡೇಶ್ವರದಿಂದ ಭಟ್ಕಳಕ್ಕೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಹಿಂಬದಿಯಿಂದ ವೇಗವಾಗಿ ಬಂದು ಗುದ್ದಿದೆ. ಟೆಂಪೊದಲ್ಲಿದ್ದ 20 ಪ್ರಯಾಣಿಕರು, ಬಸ್ ನಲ್ಲಿದ್ದ ಓರ್ವ ಮಹಿಳೆ ಗಾಯಗೊಂಡಿದ್ದಾರೆ.
  ಬಸ್ ಚಾಲಕ ಉದಯ ಬಂಗೇರಾ ವಿರುದ್ಧ ಮುರುಡೇಶ್ವರ  ಠಾಣೆಯಲ್ಲಿ ದೂರು ದಾಖಲಾಗಿದೆ‌.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button