Kannada NewsLatest

*ಬೆಳಗಾವಿ ಅಧಿವೇಶನ: ಸರ್ಕಾರಕ್ಕೆ ತಟ್ಟಲಿದೆ ಪ್ರತಿಭಟನೆಗಳ ಬಿಸಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಾಳೆಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಅಧಿವೇಶನದ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ತಟ್ಟಲಿದೆ.

ಪ್ರತಿಭಟನೆಗೆ ಅನುಮತಿ ಕೋರಿ 62 ವಿವಿಧ ಸಂಘಟನೆಗಳು ಅರ್ಜಿ ಸಲ್ಲಿಸಿದ್ದು, ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನಾಕಾರರು ಜಾಗ ನಿಗದಿ ಮಾಡಿ ಹೋರಾಟಕ್ಕೆ ಸಜ್ಜಾಗಿವೆ.

ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ಈಗಾಗಲೇ ಹಲವು ಸಂಘಟನೆಗಳು ಪ್ರತಿಭಟನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರಿಗೆ ಹೋರಾಟಕ್ಕೆ ಪೊಲೀಸ್ ಇಲಾಖೆ ಜಾಗ ನಿಗದಿ ಮಾಡಿದೆ.

ಮೀಸಲಾತಿ ಕುರಿತು ವಿವಿಧ ಸಮುದಾಯಗಳು ಪ್ರತಿಭಟನೆ ನಡೆಸಲಿವೆ. ರೈತ ಸಂಘಟನೆಗಳು ಹೋರಾಟಕ್ಕಾಗಿ ಸಜ್ಜಾಗಿವೆ. ಒಂದು ದಿನಕ್ಕೆ ಹತ್ತು ಕಡೆಗಳಲ್ಲಿ ಪ್ರತಿಭಟನೆ ನಡೆಯಲಿದ್ದು, ಒಟ್ಟು 10 ಟೆಂಟ್ ಗಳನ್ನು ನಿರ್ಮಾಣ ಮಾಡಲಾಗಿದೆ.

Home add -Advt

ಸುವರ್ಣಸೌಧದ ಮುಂಭಾಗ ಬಸ್ತವಾಡ ಬಳಿ 7 ಟೆಂಟ್, ಕೊಂಡಸಕೊಪ್ಪ ಗ್ರಾಮದ ಬಳಿ ಮೂರು ಟೆಂಟ್ ಹಾಕಲಾಗಿದ್ದು, ಟೆಂಟ್ ಗಳ ಸುತ್ತ ಸಿಸಿಟಿವಿ ಅಳವಡಿಸಲಾಗಿದೆ. ಪ್ರತಿಭಟನಾ ಸ್ಥಳಕ್ಕೆ ಓರ್ವ ಎಸ್ ಪಿ ನೇತೃತ್ವದಲ್ಲಿ ಸಾವಿರಕ್ಕೂ ಅಧಿಕ ಪೊಲೀಸರ ನಿಯೀಜನೆ ಮಾಡಲಾಗುತ್ತಿದೆ.

ನಾಳೆ ಕಬ್ಬಿನ ಬೆಲೆ ನಿಗದಿಗೆ ಆಗ್ರಹಿಸಿ ರೈತರು ಹೋರಾಟ ನಡೆಸಲಿದ್ದರೆ, ಡಿ.21ರಂದು ಮಾದಿಗ ದಂದೋರ ಸಮಿತಿ ಹೋರಾಟ ನಡೆಸಲಿದೆ. ಡಿ.22ರಂದು ಪಂಚಮಸಾಲಿ ಸಮುದಾಯ 2ಎ ಮೀಸಲಾತಿಗಾಗಿ ಹೋರಾಟಕ್ಕೆ ಸಜ್ಜಾಗಿದೆ. ಈ ಹೋರಾಟಕ್ಕೆ 100 ಎಕರೆ ಜಾಗದ ಬೃಹತ್ ಜಾಗ ನಿಗದಿ ಮಾಡಲಾಗಿದೆ ಎಂದು ಬೆಳಗಾವಿ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಮಾಹಿತಿ ನೀಡಿದ್ದಾರೆ.

ಇಲ್ಲಿದೆ ಸಮಗ್ರ ವಿವರ – https://pragati.taskdun.com/wp-content/uploads/2022/12/SHORT-LIST-AS-18-12-2022.pdf

 

*PSI ಗೀತಾಂಜಲಿ ಸಸ್ಪೆಂಡ್*

https://pragati.taskdun.com/psi-geetanjalisuspendedraichur/

Related Articles

Back to top button