Belagavi NewsBelgaum NewsKannada NewsKarnataka NewsLatest

*ಬೆಳಗಾವಿ: ಈಸಕ್ಕಿಯ ಆಸೆ ನಾಟಕ ಪ್ರದರ್ಶನ*

ಪ್ರಗತಿವಾಹಿನಿ ಸುದ್ದಿ: ಡಾ.ರಾಮಕೃಷ್ಣ ಮರಾಠೆ ರಚಿಸಿದ ‘ಈಸಕ್ಕಿಯ ಆಸೆ’ ನಾಟಕ ಫೆ.7ರಂದು ಪ್ರದರ್ಶನವಾಗಲಿದೆ.
ಬೆಳಗಾವಿಯ ರಂಗಸೃಷ್ಟಿ ಕಲಾವಿದರು ಕನ್ನಡ ಭವನದಲ್ಲಿ ನಾಟಕ ಪ್ರದರ್ಶಿಸುವರು.

ಫೆ.7ರಂದು ಸಂಜೆ 5:30ಕ್ಕೆ ನಾಟಕ ಆರಂಭವಾಗಲಿದೆ. ಶಿರೀಷ ಜೋಶಿ ಈ ನಾಟಕ ನಿರ್ದೇಶಿಸಿದ್ದಾರೆ. ರಂಗ ವಿನ್ಯಾಸ – ಶರಣಗೌಡ ಪಾಟೀಲ್, ನೃತ್ಯ ಸಂಯೋಜನೆ – ಶಾಂತಾ ಆಚಾರ್ಯ ಹಾಗೂ ಸಂಗೀತ ನಿರ್ದೇಶನ ಮಂಜುಳಾ ಜೋಶಿಯವರದ್ದಾಗಿದೆ.

ಮಹಾಂತೇಶ ಕವಟಗಿಮಠ ನಾಟಕದ ಪ್ರಾಯೋಜಕರಾಗಿದ್ದು, ಲಿಂಗಾಯತ ಮಹಿಳಾ ಸಮಾಜ ಸಹಕಾರ ನೀಡಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಆಗಮಿಸಿ ಪ್ರೋತ್ಸಾಹಿಸಲು ಸಂಘಟಕರು ಕೋರಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button