Kannada NewsKarnataka NewsLatest

*ಏಕಾಏಕಿ ನೆಲಕ್ಕುರುಳಿದ 120 ಅಡಿ ಎತ್ತರದ ತೇರು*

ಪ್ರಗತಿವಾಹಿನಿ ಸುದ್ದಿ: 120 ಅಡಿ ಎತ್ತರದ ತೇರು ನಿಯಂತ್ರಣ ತಪ್ಪಿ ಉರುಳಿ ಬಿದ್ದಿರುವ ಘಟನೆ ಬೆಂಗಳೂರಿನ ಆನೇಕಲ್ ಬಳಿಯ ಕಮ್ಮಸಂದ್ರದಲ್ಲಿ ಸಂಭವಿಸಿದೆ.

ಇತಿಹಾಸ ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಪಾಲ್ಗೊಳ್ಳಲು ಈ ತೇರು ತೆರಳುತ್ತಿತ್ತು. ಹಿಲಲಿಗೆ ಗ್ರಾಮದಿಂದ 120 ಅಡಿ ಎತ್ತರದ ತೇರನ್ನು ಎತ್ತುಗಳು, ಟ್ರ್ಯಾಕ್ಟರ್ ಮೂಲಕವಾಗಿ ಎಳೆದು ತೇರಲಾಗುತ್ತಿತ್ತು.

ಈ ವೇಳೆ ಆನೆಕಲ್ ಬಳಿಯ ಕಮ್ಮಸಂದ್ರದ ಹೈಪರ್ ಮಾರ್ಕೆಟ್ ಬಳಿ ನಿಯಂತ್ರಣ ತಪ್ಪಿ ಏಕಾಏಕಿ ತೇರಿ ನೆಲಕ್ಕುರುಳಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಐತಿಹಾಸಿಕ ತೇರು ನೆಲಕ್ಕುರುಳಿ ಬಿದ್ದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button