Belagavi NewsBelgaum NewsKarnataka News

*ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣ: ಆರೋಪಿ ಅರೆಸ್ಟ್*

ಹಿಟ್ ಆಂಡ್ ರನ್: ಅಪಘಾತ ಪಡಿಸಿದ ವಾಹನ ಜಪ್ತಿ

ಪ್ರಗತಿವಾಹಿನಿ ಸುದ್ದಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂದಿಸಿದಂತೆ ಕಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಟ್ರಕ್ ಚಾಲಕನ್ನು ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಧುಕರ ಕೊಂಡಿರಾಮ ಸೋಮವಂಶಿ (65) ಬಂಧಿತ ಟ್ರಕ್ ಚಾಲಕ. ಕಾರು ಚಾಲಕ ಶಿವಪ್ರಸಾದ ಜಿ. ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಟ್ರಕ್ ಚಾಲಕನನ್ನು ಬಂಧಿಸಿ ಟ್ರಕ್ ಜಪ್ತಿ ಮಾಡಲಾಗಿದೆ.

Home add -Advt

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸರ್ಕಾರಿ ವಾಹನ ಇನ್ನೋವಾ ಕಾರ್ ನಲ್ಲಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಳರ್, ಸಹೋದರ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೋಳಿ ಮತ್ತು ಅವರ ಅಂಗರಕ್ಷಕರಾದ ಈರಪ್ಪ ಕಲ್ಲಪ್ಪ ಹುಣಶೀಕಟ್ಟಿ ಇವರುಗಳನ್ನು ಕರೆದುಕೊಂಡು ಬೆಂಗಳೂರದಿಂದ ಬೆಳಗಾವಿಗೆ ಹೋಗುತ್ತಿದ್ದಾಗ ಕಿತ್ತೂರ ದಾಟಿ ಅಂಬಡಗಟ್ಟಿ ಹದ್ದಿ ಅಂಬಡಗಟ್ಟಿ ಕ್ರಾಸ್ ಹತ್ತಿರ ಧಾರವಾಡ-ಬೆಳಗಾವಿ ಎನ್‌ಎಚ್-48 ರಸ್ತೆಯ ಮೇಲೆ ಇದ್ದಾಗ ಯಾವುದೋ ಟ್ರಕ್ ಚಾಲಕನು ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ಎಡಕ್ಕೆ ತನ್ನ ವಾಹನವನ್ನು ತೆಗೆದುಕೊಂಡಿದ್ದು, ಅಪಘಾತ ತಪ್ಪಿಸಲು ಕಾರು ಚಾಲಕ ತನ್ನ ಕಾರನ್ನು ಎಡಗಡೆಗೆ ತೆಗೆದುಕೊಂಡರೂ ಸಹ ಆ ಟ್ರಕ್ ಚಾಲಕನು ಕಾರಿನ ಬಲಗಡೆ ಬದಿಗೆ ತಾಗಿಸಿ, ಅಪಘಾತ ಪಡಿಸಿದ್ದು, ಕಾರು ನಿಯಂತ್ರಣ ತಪ್ಪಿ ಸರ್ವಿಸ್ ರಸ್ತೆ ಕಡೆಗೆ ಇಳಿದು ಮರಕ್ಕೆ ಡಿಕ್ಕಿ ಹೊಡೆದು ಒಳಗಡೆ ಇದ್ದ ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ. ಅಪಘಾತದ ಬಳಿಕ ಟ್ರಕ್ ಚಾಲಕ ತನ್ನ ಟ್ರಕ್‌ನ್ನು ನಿಲ್ಲಿಸದೇ ಪರಾರಿಯಾಗಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿತ್ತು. ಕಿತ್ತೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ಪ್ರಕರಣದಲ್ಲಿ ಅಪಘಾತ ಪಡಿಸಿದ ಆರೋಪಿ ಹಾಗೂ ವಾಹನ ಪತ್ತೆ ಮಾಡಿದ್ದಾರೆ. ಅಪಘಾತದ ವೇಳೆ ಧಾರವಾಡ-ಬೆಳಗಾವಿ ಎನ್‌ಎಚ್-48 ರಸ್ತೆಯ ಮೇಲೆ ಸಂಚರಿಸುವ ವಾಹನಗಳನ್ನು ಹಿರೇಬಾಗೇವಾಡಿ ಟೋಲ್ ನಾಕಾದಲ್ಲಿ ಹಾಗೂ ಅಂಬಡಗಟ್ಟಿ ವ್ಯಾಪ್ತಿಯಲ್ಲಿರುವ ಹರಿಯಾಣ ಧಾಬಾದಲ್ಲಿ ಅಳವಡಿಸಿದ ಸಿ.ಸಿ. ಕ್ಯಾಮರಾ ದೃಶ್ಯಾವಳಿಗಳನ್ನು ಸಂಗ್ರಹ ಮಾಡಿ ಖಚಿತವಾದ ಸಾಕ್ಷ್ಯಾಧಾರಗಳ ಮೇಲೆ ಅಪಘಾತಕ್ಕೆ ಕಾರಣನಾದ ಟ್ರಕ್ ನಂ: ಎಮ್.ಎಚ್-12/ಟಿವಿ-9740 ನೇದ್ದನ್ನು ಹಾಗೂ ಚಾಲಕನಾದ ಮಧುಕರ ಕೊಂಡಿರಾಮ ಸೋಮವಂಶಿ (65) ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಮಹಾರಾಷ್ಟ್ರದ ಪಮಣಿ ಜಿಲ್ಲೆಯಯವನು.

ಬೈಲಹೊಂಗಲ ಡಿ ಎಸ್ ಪಿ ರವಿ ಡಿ. ನಾಯ್ಕ, ಕಿತ್ತೂರವೃತ್ತ ಸಿಪಿಐ ಶಿವಾನಂದ ಗುಡಗನಟ್ಟಿರವರ ಮಾರ್ಗದರ್ಶನದಲ್ಲಿ ಪ್ರವೀಣ ಗಂಗೋಳ, ಪಿ.ಎಸ್.ಐ. [ಕಾ&ಸು], ಪ್ರವೀಣ ಕೋಟಿ ಪಿಎಸ್‌ಐ [ಅ.ವಿ] ಕಿತ್ತೂರ ಪೊಲೀಸ್ ಠಾಣೆ. ಮತ್ತು ಸಿಬ್ಬಂದಿ ಜನರಾದ ಎಸ್.ಎ ದಫೇದಾರ ಸಿಪಿಸಿ-3046. ಎನ್.ಆರ್ ಗಳಗಿ ಸಿಪಿಸಿ-3070. ಕೆ.ಎಸ್ ಮಧುರ ಸಿಪಿಸಿ-3674. ರಾಜು ಗೌರಕ್ಕನವರ ಸಿಪಿಸಿ- 3156. ಎಸ್.ಎಮ್ ಪೆಂಟೇದ ಸಿಪಿಸಿ-3704. ಎಸ್.ಆರ್ ಪಾಟೀಲ ಸಿಪಿಸಿ-3001. ಮತ್ತು ಜಿಲ್ಲಾ ಟೆಕ್ನಿಕಲ್ ಸೆಲ್‌ನ ವಿನೋದ ಟಕ್ಕಣ್ಣವರ ಮತ್ತು ಇತರರು ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ಪತ್ತೆ ಕಾರ್ಯವನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಭೀಮಾಶಂಕರ ಗುಳೇದ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶೃತಿ ಎಚ್.ಎಸ್. ಆರ್.ಬಿ ಬಸರಗಿ ಪ್ರಶಂಶಿಸಿದ್ದಾರೆ.

Related Articles

Back to top button