Karnataka News

*ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್ ಐ, ಕಾನ್ಸ್ ಟೇಬಲ್*

ಪ್ರಗತಿವಾಹಿನಿ ಸುದ್ದಿ: ಲಂಚಕ್ಕೆ ಕೈಯೊಡ್ಡಿದಾಗಲೇ ಪಿಎಸ್ ಐ ಹಾಗೂ ಕಾನ್ಸ್ ಟೇಬಲ್ ಇಬ್ಬರೂ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸ್ ಪಿಎಸ್ ಐ ಅರ್ಜುನ್ ಗೌಡ ಹಾಗೂ ಕಾನ್ಸ್ ಟೇಬಲ್ ಸುರೇಶ್ ಲೋಕಾಯುಕ್ತ ಬಲೆಗೆ ಬಿದ್ದವರು.

ಬಾರ್ ಮಾಲೀಕ ಪ್ರಶಾಂತ್ ಬಳಿ ೫೦ ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಪ್ರಶಾಂತ್ ಲೋಕಾಯುಕ್ತಕ್ಕೆ ದೂರು ನಿದಿದ್ದರು. 20 ಸಾವಿರ ಲಂಚ ಮುಂಗಡವಾಗಿ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಬಂಧಿಸಿದ್ದಾರೆ. ಸದ್ಯ ಪಿಎಸ್ ಐ ಹಾಗೂ ಕಾನ್ಸ್ ಟೇಬಲ್ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Home add -Advt

Related Articles

Back to top button