Kannada NewsKarnataka NewsLatest

ಅಮಿತ್ ಶಾ ಬೆಳಗಾವಿ ಕಾರ್ಯಕ್ರಮದಲ್ಲಿ ಕೆಲವು ಬದಲಾವಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭಾನುವಾರ ಬೆಳಗಾವಿಗೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಸಾ ಅವರ ಕಾರ್ಯಕ್ರಮ ಸಮಯದಲ್ಲಿ ಕೆಲವು ಬದಲಾವಣೆಯಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪ್ರವಾಸ ಪಟ್ಟಿಯಲ್ಲಿ ಈ ಬದಲಾವಣೆ ಕಾಣಿಸುತ್ತಿದೆ.

ಜಿಲ್ಲಾ ಕ್ರೀಡಾಂಗಣದಲ್ಲಿ ಜನಸೇವಕ ಸಮಾವೇಶ ಮುಗಿಸಿ ದಿ.ಸುರೇಶ ಅಂಗಡಿ ಅವರ ಮನೆ ಭೇಟಿ ನೀಗದಿಯಾಗಿತ್ತು ಆದರೆ ಈಗ ಜನಸೇವಕ ಕಾರ್ಯಕ್ರಮಕ್ಕೂ ಮೊದಲೇ ಸುರೇಶ ಅಂಗಡಿ ಅವರ ಮನೆಗೆ ಅಮಿತ್ ಸಾ ಭೇಟಿ ನೀಡಲಿದ್ದಾರೆ. 3.30ಕ್ಕೆ ಸುರೇಶ ಅಂಗಡಿ ನಿವಾಸಕ್ಕೆ ತೆರಳಲಿರುವ ಅಮಿತ್ ಸಾ 3.55ಕ್ಕೆ ಅಲ್ಲಿಂದ ತೆರಳುವರು. 4 ಗಂಟೆಗೆ ಜನಸೇವಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜನಸೇವಕ ಸಮಾವೇಶಕ್ಕೂ ಮೊದಲು 3.20ಕ್ಕೆ ಕೆಎಲ್ಇ ಸಂಸ್ಥೆಯ ಜೆಎನ್ಎಂಸಿ ಕಾರ್ಯಕ್ರಮಕ್ಕೆ ಅಮಿತ್ ಶಾ ಹೋಗಬೇಕಿತ್ತು. ಆದರೆ ಈ ಕಾರ್ಯಕ್ರಮ ಜನಸೇವಕ್ ಸಮಾವೇಶದ ನಂತರ ಅಂದರೆ ಸಂಜೆ 5.40ಕ್ಕೆ ನಡೆಯಲಿದೆ. ಅಲ್ಲಿಂದ ಕೆಎಲ್ಇ ಶತಮಾನೋತ್ಸವ ಸಭಾಂಗಣಕ್ಕೆ ತೆರಳಿ 6.15ರಿಂದ 7.15ರ ವರೆಗೆ ಬಿಜೆಪಿ ಪ್ರಮುಖರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

7.30ಕ್ಕೆ ವಿಮಾನದ ಮೂಲಕ ನವದೆಹಲಿಗೆ ತೆರಳುವರು. ಅಮಿತ್ ಶಾ ಅವರನ್ನು ಬೀಳ್ಕೊಟ್ಟ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.

ಅಮಿತ್ ಶಾ ಸಭೆ ಸ್ಥಳ ಬದಲಾವಣೆ: ಯಾರಿಗೆಲ್ಲ ಅವಕಾಶ?

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಮಗ್ರ ಪ್ರವಾಸ ಪಟ್ಟಿ ಇಲ್ಲಿದೆ –

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button