
ಪ್ರಗತಿವಾಹಿನಿ ಸುದ್ದಿ, ಕಾಗವಾಡ – ಕಾಗವಾಡ ತಾಲೂಕಿನ ಉಗಾರ ಸಕ್ಕರೆ ಕಾರ್ಖಾನೆಯಲ್ಲಿ ಮಂಗಳವಾರ ಆಕಸ್ಮಿಕವಾಗಿ ಬೆಂಕಿ ತಗುಲಿ ಅವಘಡ ಸಂಭವಿಸಿದೆ.

ಕಾರ್ಖಾನೆಯ ಕಾರ್ಮಿಕರು ಮತ್ತು ಪರಿಸರದ ಸಕ್ಕರೆ ಕಾರ್ಖಾನೆಗಳ ಕಾರ್ಮಿಕರ ನೆರವಿನಿಂದ ಅಗ್ನಿ ನಂದಿಸಲಾಗಿದೆ.
ಸಕ್ಕರೆ ಕಾರ್ಖಾನೆಯ ಎಂ.ಡಿ ಚಂದನ್ ಶಿರಗಾಂವಕರ ಈ ಬಗ್ಗೆ ಮಾಹಿತಿ ನೀಡಿ, ಸಕ್ಕರೆ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ, ಆದರೆ ಕಾರ್ಖಾನೆ ಕಾರ್ಮಿಕರು ಜೀವದ ಹಂಗುತೊರೆದು ಪ್ರಯತ್ನಿಸಿ ಅಗ್ನಿ ನಂದಿಸಿದ್ದಾರೆ ಎಂದರು.
ನಾಳೆಯಿಂದ ಕಬ್ಬು ನುರಿಸುವುದು ಮುಂದುವರಿಕೆ :
ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಸ್ಥಳದಲ್ಲಿ ಎಲ್ಲ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು ನಾಳೆ ಮಧ್ಯಾಹ್ನದವರೆಗೆ ಮತ್ತೆ ಕಬ್ಬು ನುರಿಸುವ ಕಾರ್ಯ ಯಥಾಸ್ಥಿತಿಯಾಗಿ ಮುಂದುವರಿಯಲಿದೆ ಎಂದು ಹೇಳಿದರು.