Kannada NewsKarnataka NewsLatest

ಬೆಳಗಾವಿ ಬಳಿ ವಾಹನ ಅಡ್ಡಗಟ್ಟಿ, ಪಿಸ್ತೂಲ್, ಚಾಕು ತೋರಿಸಿ 4.97 ಕೋಟಿ ರೂ ದರೋಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  –  ಬೆಳಗಾವಿ  ಜಿಲ್ಲೆಯ ಹಿರೇಬಾಗೇವಾಡಿ – ಬೈಲಹೊಂಗಲ ರಸ್ತೆಯಲ್ಲಿ  ವಾಹನವನ್ನು ಅಡ್ಡಗಟ್ಟಿ 4.97 ಕೋಟಿ  ರೂ.ಗಳನ್ನು ದರೋಡೆ ಮಾಡಲಾಗಿದೆ.
ಏಪ್ರಿಲ್ 8ರಂದು ಗದ್ದಿಕರುವಿನಕೊಪ್ಪ ಗ್ರಾಮದ ಬಳಿ ಈ ಘಟನೆ ನಡೆದಿದೆ. ಸಾಂಗ್ಲಿಯ ವಿಕಾಸ ವಿಲಾಸ ಕದಂ ಎನ್ನುವವರ ಈ ಕುರಿತು ಬೈಲಹೊಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 5 ಜನ ಅಪರಿಚಿತರ ವಿರುದ್ಧ ದೂರು ನೀಡಲಾಗಿದೆ.
ವಿಕಾಸ ಕದಂ ಅವರು ಕೊಲ್ಲಾಪುರದಲ್ಲಿ ಲಕ್ಷ್ಮಿ ಗೋಲ್ಡ್ ಎನ್ನುವ ಬಂಗಾರದ ಅಂಗಡಿ ನಡೆಸುತ್ತಿದ್ದಾರೆ. ಕೊಲ್ಲಾಪುರದಿಂದ ಉಡುಪಿಗೆ ಹಣವನ್ನು ಕಾರಿನಲ್ಲಿ ಕಳಿಸುವ ಸಂದರ್ಭದಲ್ಲಿ ಮಾರ್ಗಮಧ್ಯೆ ಧರೋಡೆಯಾಗಿದೆ.
ಒಟ್ಟೂ 4 ಕೋಟಿ 97 ಲಕ್ಷ, 30 ಸಾವಿರ ರೂ.ಗಳನ್ನು ಗೋಣಿ ಚೀಲ ಹಾಗೂ ರಟ್ಟಿನ ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಿ ಕಾರಿನಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ ಕಾರು ಹಿರೇಬಾಗೇವಾಡಿಯಿಂದ ಬೈಲಹೊಂಗಲ ರಸ್ತೆಯಲ್ಲಿ ಸಾಗುತ್ತಿದ್ದಾಗ ವಾಹನ ಅಡ್ಡಗಟ್ಟಿ ದರೋಡೆ ಮಾಡಲಾಗಿದೆ.
 ಘಟನೆಯಲ್ಲಿ ಸಚೀನ್ ಬಾನುದಾಸ ಐಹೋಳ ವಾಡೇಗಾಂವ  ಮತ್ತು  ಮಹಾದೇವ ರಾಮಚಂದ್ರ ಬನಸೋಡ , ಶೇನವಾಡಿ ಎನ್ನುವವರು ಗಾಯಗೊಂಡಿದ್ದಾರೆ.
 ಬೈಲಹೊಂಗಲ ಪೊಲೀಸ್ ಠಾಣೆ ಇನಸ್ಪೆಕ್ಟರ್ ಯು.ಹೆಚ್ ಸಾತೇನಹಳ್ಳಿ,  ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button