Kannada NewsKarnataka NewsLatest

ಮಣ್ಣೂರಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಣ್ಣೂರ ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ಚಾಲನೆ ನೀಡಲಾಯಿತು. 

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅನುಪಸ್ಥಿತಿಯಲ್ಲಿ, ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ ಹಾಗೂ ಗ್ರಾಮದ ಮುಖಂಡರು ಸೇರಿ  ಹೈಮಾಸ್ಟ್ ವಿದ್ಯುತ್ ಲೈಟ್ ಪಿಲ್ಲರ್  ಉದ್ಘಾಟನೆ, 35 ಸೋಲಾರ್ ಬೀದಿ ದೀಪಗಳ ಅಳವಡಿಕೆ ಹಾಗೂ ಎರಡು ಆಧುನಿಕ ಬಸ್ (Smart Bus Stand) ನಿಲ್ದಾಣಗಳ ಕಾಮಗಾರಿಗಳಿಗೆ  ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ  ಹಿರಿಯರು, ಯುವರಾಜ ಕದಂ, ಯುವ ಕಾಂಗ್ರೆಸ್ ಮುಖಂಡ ಜಯವಂತ ಬಾಳೇಕುಂದ್ರಿ, ಅಶೋಕ ಬ ಚೌಗಲೆ, ದೇವಜಗಿ ಕಮೀಟಿ ಚೇರಮನ್ ಸುಜಿತ್ ಮಂಡೋಳಕರ್, ಮಧು ಚೌಗಲೆ, ಕೃಷ್ಣ ಮಂಡೋಳಕರ್, ವಿಷ್ಣು ಚೌಗಲೆ, ಎಸ್ ಆರ್ ಕಾಳಕುಂದ್ರಿ, ದತ್ತಾ ಚೌಗಲೆ ಹಾಗೂ ಮುಂತಾದವರು ಉಪಸ್ಥಿತರಿದ್ದರು.

Home add -Advt

Related Articles

Back to top button