
ಪ್ರಗತಿವಾಹಿನಿ ಸುದ್ದಿ: ಶಿಂದೊಳ್ಳಿ ಗ್ರಾಮದ ಇಂಡಾಲ ನಗರದ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗೆ ಸ್ಥಳೀಯರ ಸಮ್ಮುಖದಲ್ಲಿ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಶನಿವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಈ ವೇಳೆ ನಾಗೇಶ ದೇಸಾಯಿ, ಸುರೇಶ ಪಾಟೀಲ, ರಾಜು ಪಾಟೀಲ, ಶೀಲಾ ತಿಪ್ಪಣ್ಣಗೋಳ, ರಾಕೇಶ ಪಾಟೀಲ, ಜಾನಕಿರಾಮ ನಾಯ್ಡು, ಶಿವಾನಂದ ಪಟ್ಟಣಶೆಟ್ಟಿ, ಶಿವು ಸೈಬಣ್ಣವರ, ದೀಪಕ ಕೇತ್ಕರ್, ಸೋಮು, ಅಭಿಷೇಕ, ಸಂಜು ಕರವಿರನವರ, ದಯಾನಂದ ಕರಲಗಟ್ಟಿ, ಮುರುಳಿಧರ್ ಮಜುಮದಾರ, ನಾಗಪ್ಪ ಬಡಿಗೇರ, ಬಾಳಾ ಬಾಂದೇಕರ, ರಮೇಶ ತಳವಾರ, ಸಾತಲಿಂಗ ಹಿರೇಮಠ, ಆನಂದ ಅಕ್ಕನ್ನವರ ಉಪಸ್ಥಿತರಿದ್ದರು.