Kannada NewsKarnataka NewsLatest

*ಮಗನ ಆತ್ಮಹತ್ಯೆ; ಮನನೊಂದ ತಂದೆಯೂ ನೇಣಿಗೆ ಶರಣು*

14 ವರ್ಷದ ಮಗ ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ತೀವ್ರವಾಗಿ ಮನನೊಂದ ತಂದೆ ಕೂಡ ಸಾವಿನ ಹಾದಿ ಹಿಡಿದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದಲ್ಲಿ ನಡೆದಿದೆ.

ಕೆಲ ದಿನಗಳ ಹಿಂದೆ 8ನೇ ತರಗತಿ ಓದುತ್ತಿದ್ದ ಮಗ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದ. ಮಗನ ಸಾವಿನಿಂದ ನೊಂದಿದ್ದ ತಂದೆ ಯೋಗೀಶ್ ಪೂಜಾರಿ (41) ಇದೀಗ ಆತ್ಮಹತ್ಯೆಗೆ ಶರಣಣಾಗಿದ್ದಾರೆ.

ಯೋಗೀಶ್ ಹಾಗೂ ಪತ್ನಿ ಮನೆಯಲ್ಲಿ ಇಬ್ಬರು ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋಗಿದ್ದರು. 8ನೇ ತರಗತಿ ಓದುತ್ತಿದ್ದ ಯಕ್ಷಿತ್ ಹಾಗೂ ಆತನ ತಮ್ಮ ಆಟವಾಡುತ್ತ ಇಬ್ಬರು ಜಗಳ ಮಾಡಿಕೊಂಡಿದ್ದು, ತಮ್ಮನ ಎದುರಲ್ಲೇ ಯಕ್ಷಿತ್ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದೆ.

ಮಗನ 14ನೇ ದಿನದ ಕಾರ್ಯಮುಗಿಸಿದ್ದ ತಂದೆ ಯೋಗೀಶ್ ಇದೀಗ ಆತ್ಮಹತ್ಯೆ ಮಾಡಿಕೊಂಡು ತಾವೂ ಸಾವಿನ ಹಾದಿ ತುಳಿದಿದ್ದಾರೆ.

Home add -Advt


Related Articles

Back to top button