Kannada NewsKarnataka NewsLatest

ಅನ್ನ, ನೀರು, ಆಹಾರದಷ್ಟೇ ಶಿಕ್ಷಣವೂ ಮುಖ್ಯ: ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಬದುಕಿಗೆ ಆಹಾರ,  ಆಹಾರ, ನೀರು, ಗಾಳಿ ಎಷ್ಟು ಮುಖ್ಯವೋ, ಸ್ಪರ್ಧಾತ್ಮಕವಾದ ಇಂದಿನ ಜಗತ್ತಿನಲ್ಲಿ ಶಿಕ್ಷಣವೂ ಅಷ್ಟೇ ಮುಖ್ಯ ಎಂದು  ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.

Home add -Advt

ಗ್ರಾಮೀಣ ಕ್ಷೇತ್ರದ ಖನಗಾಂವ ಬಿ ಕೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ನೂತನವಾಗಿ ನಿರ್ಮಾಣಗೊಂಡ ಹೆಚ್ಚುವರಿ ಕೊಠಡಿಗಳ ಕಟ್ಟಡ ಹಾಗೂ ನೂತನ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಜಗತ್ತಿನ ಪೈಪೋಟಿಯಲ್ಲಿ ಯಶಸ್ವಿಯಾಗಬೇಕೆಂದರೆ ಪ್ರತಿಯೊಬ್ಬರೂ ಶಿಕ್ಷಣ ಪಡೆದು ಜ್ಞಾನ ಸಂಪಾದಿಸಬೇಕು. ಈ ನಿಟ್ಟಿನಲ್ಲಿ ಮಕ್ಕಳು ಎಲ್ಲ ಮೂಲಸೌಕರ್ಯಗಳನ್ನು ಬಳಸಿಕೊಂಡು ಅಕ್ಷರಸ್ಥರಾಗಿ ಉನ್ನತ ಬದುಕು ಕಾಣಲು ಯತ್ನಿಸಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ದೇವಸ್ಥಾನದ ಟ್ರಸ್ಟ್ ಕಮಿಟಿಯವರು, ಮಹೇಶ ಸುಗ್ಗೆಣ್ಣವರ, ಬಸವರಾಜ ಬೆಕ್ಕಿನಕೇರಿ, ಲಕ್ಷ್ಮೀ ಬಗನಾಳ, ತುಕಾರಾಂ ದಿಂಡಲಕುಂಪಿ, ರಾಜಾಅಲಿಸಾಬ್ ಜಮಾದಾರ, ರುಕ್ಮಿಣಿ ಹೊಸಮನಿ, ದೊಡ್ಡಲಗಮಣ್ಣ ಚಚಡಿ, ಹೊನಪ್ಪ ಹೊಸಮನಿ, ಕರೆಪ್ಪ ಹೊಸಮನಿ, ಸದೆಪ್ಪ ಬಂಗೆಣ್ಣವರ, ಬಸಪ್ಪ ಚಚಡಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಕವರ್ ಸಮೇತ ಚಾಕಲೇಟ್ ತಿಂದ ಬಾಲಕಿ; ದುರ್ಮರಣ

Related Articles

Back to top button