Karnataka News

*ಪಿಸ್ತೂಲ್ ಹಿಡಿದು ಪಬ್ ಗೆ ಎಂಟ್ರಿಕೊಟ್ಟ ಕಳ್ಳ: ಕ್ಯಾಷ್ ಕೌಂಟರ್ ಒಡೆದು ಹಣ ದೋಚಿ ಪರಾರಿ*

ಪ್ರಗತಿವಾಹಿನಿ ಸುದ್ದಿ: ಪಿಸ್ತೂಲ್ ಹಿಡಿದು ಪಬ್ ಗೆ ಎಂಟ್ರಿ ಕೊಟ್ಟ ಕಳ್ಳ ಕ್ಯಾಷ್ ಕೌಂಟರ್ ಒಡೆದು ಹಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ರಾಜಾಜಿನಗರದಲ್ಲಿರುವ ಜಾಮೆಟ್ರಿ ಪಬ್ ನಲ್ಲಿ ಕಳ್ಳನೊಬ್ಬ ಪಬ್ ಗೆ ನುಗ್ಗಿ ಹಣ ದೋಚಿ ಎಸ್ಕೇಪ್ ಆಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸೈದಲು ಅಡಾವತ್ ತಿಳಿಸಿದ್ದಾರೆ. ಪಬ್ ಸಿಬ್ಬಂದಿ ಮಾಹಿತಿ ಮೇರೆಗೆ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಕಳ್ಳ ಈಗಗಾಲೇ ಕ್ಯಾಷ್ ಕೌಂಟರ್ ಒಡೆದು ಹಣ ದೋಚಿ ಎಸ್ಕೇಪ್ ಆಗಿದ್ದಾನೆ ಎಂದರು.

ಬ್ಯಾಕ್ ಗೇಟ್ ನಿಂದ ಕಳ್ಳ ಪಬ್ ಗೆ ಎಂಟ್ರಿ ಕೊಟ್ಟಿದ್ದಾನೆ. ಎಲ್ಲಾ ಸಿಸಿಟಿವಿ, ಲೈಟ್ ಗಳನ್ನು ಆಫ್ ಮಾಡಿ ಕಳ್ಳತನ ಮಾಡಿದ್ದಾನೆ. ಪೊಲೀಸರು ಜಾಮೆಟ್ರಿ ಪಬ್ ನಲ್ಲಿ ಪರಿಶೀಲನೆ ನಡೆಸಿದ್ದು, ಶೀಘ್ರದಲ್ಲೇ ಕಳ್ಳನನ್ನು ಬಂಧಿಸಲಾಗುವುದು ಎಂದು ತಿಳಿಸಿದರು.

Home add -Advt


Related Articles

Back to top button