Latest

’ಕಾವೇರಿ’ ಯಲ್ಲಿ ಗರಿಗೆದರಿದ ರಾಜಕೀಯ; ಸಚಿವರು, ಶಾಸಕರಿಂದ ಸಿಎಂ ಭೇಟಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿಗೂ ಮುದಲೇ ರಾಜ್ಯ ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಸಿಎಂ ಬಿಎಸ್ ವೈ ಪರ ನಿಲ್ಲಲು ಆಪ್ತ ಬಣಗಳಿಂದಲೂ ತಂತ್ರಗಾರಿಕೆ ಆರಂಭವಾಗಿದೆ. ಹಲವು ಶಾಸಕರು, ಸಚಿವರು ಸಿಎಂ ನಿವಾಸಕ್ಕೆ ದೌಡಾಯಿಸಿ ಚರ್ಚೆ ನಡೆಸಿದ್ದಾರೆ.

ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಇಂದು ಸಿಎಂ ನಿವಾಸ ಕಾವೇರಿಗೆ ಭೇಟಿ ನೀಡಿದ್ದಾರೆ. ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಪ್ರಭು ಚೌವ್ಹಾಣ್, ಸಿ.ಸಿ.ಪಾಟೀಲ್ ಹಾಗೂ ಶಾಸಕರಾದ ರಾಜು ಗೌಡ, ಮಹೇಶ ಕುಮಟಳ್ಳಿ, ಸಿದ್ದು ಸವದಿ, ಅಮೃತದೇಸಾಯಿ, ಬೆಳ್ಳಿ ಪ್ರಕಾಶ್ ಸೇರಿದಂತೆ ಹಲವರು ಸಿಎಂ ನಿವಾಸಕ್ಕೆ ದೌಡಾಯಿಸಿ ಬೆಂಬಲ ಸೂಚಿಸುತ್ತಿದ್ದು, ಅರುಣ್ ಸಿಂಗ್ ಭೇಟಿಗೂ ಮೊದಲೇ ಸಿಎಂ ಆಪ್ತರು ಮಹತ್ವದ ಸಮಾಲೋಚನೆ ನಡೆಸಿದ್ದಾರೆ.

Home add -Advt

ಮಧ್ಯಾಹ್ನ 3:30ಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಲಿದ್ದು, ಮೂರು ದಿನಗಳ ಕಾಲ ರಾಜ್ಯದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಈ ವೇಳೆ ಅರುಣ್ ಸಿಂಗ್ ಸಚಿವರು, ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸಲಿದ್ದಾರೆ. ಈ ನಿಟ್ಟಿನಲ್ಲಿ ಸಿಎಂ ಪರ ಬ್ಯಾಟ್ ಬೀಸಲು ಆಪ್ತ ಬಣಗಳು ಸಿದ್ಧತೆ ನಡೆಸಿವೆ.
ಸಿಎಂ ಭವಿಷ್ಯ ಇಂದು ಅಥವಾ ನಾಳೆ ನಿರ್ಧಾರ; ಕ್ಲೈಮ್ಯಾಕ್ಸ್ ಹಂತ ತಲುಪಿದ ಬಣ ರಾಜಕೀಯ

Related Articles

Back to top button