Kannada NewsKarnataka NewsLatest

*ಹಿಂದೂ ಎಂಬುದು ಧರ್ಮವಲ್ಲ ಎಂದ ತೋಂಟದಾರ್ಯ ಮಠದ ಡಾ.ಸಿದ್ದರಾಮಶ್ರೀ*

ಪ್ರಗತಿವಾಹಿನಿ ಸುದ್ದಿ; ಗದಗ: ಹಿಂದೂ ಎಂಬುದು ಧರ್ಮವಲ್ಲ, ಹಿಂದೂ ಎಂಬುದು ಜೀವನ ಪದ್ಧತಿ ಎಂದು ಗದಗದ ತೋಂಟದಾರ್ಯ ಮಠದ ಡಾ.ಸಿದ್ದರಾಮಶ್ರೀ ಹೇಳಿದ್ದಾರೆ.

ಧಾರವಾಡದಲ್ಲಿ ನಡೆದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸಭೆ ಬಳಿಕ ಮಾತನಾಡಿದ ತೋಂಟದಾರ್ಯಶ್ರೀಗಳು, ಓರ್ವ ಸ್ಥಾಪಕ ಇದ್ದರೆ ಮಾತ್ರ ಅದೊಂದು ಧರ್ಮ ಆಗುತ್ತದೆ. ಲಿಂಗಾಯತ ಸ್ವತಂತ್ರ ಧರ್ಮ. ಬಸವಣ್ಣ ಅದರ ಸ್ಥಾಪಕರು. ವಚನ ಸಾಹಿತ್ಯವೇ ಲಿಂಗಾಯತ ಸ್ವತಂತ್ರ ಧರ್ಮದ ಸಂವಿಧಾನ ಎಂದು ಹೇಳಿದರು.

Home add -Advt

ಹಿಂದೂ ಧರ್ಮದಲ್ಲಿ ಓರ್ವ ಪ್ರವರ್ತಕ, ಪ್ರವಾದಿ ಇಲ್ಲ. ಯಾವುದೆ ನಿರ್ಧಿಷ್ಟವಾದ ಗ್ರಂಥವಿಲ್ಲ. ಭಗವದ್ಗೀತೆಯ ಯಾವ ಶ್ಲೋಕದಲ್ಲಿಯೂ ಹಿಂದೂ ಪದ ಇಲ್ಲ. ಹಿಂದೂ ಧರ್ಮದಲ್ಲಿ 33 ಕೋಟಿ ದೇವರನ್ನು ಪೂಜೆ ಮಾಡ್ತಾರೆ. ನಾವು ಸ್ವತಂತ್ರ ಧರ್ಮ ಪಡೆದರೆ ಹಿಂದೂ ವಿರೋಧಿಯಾಗಲ್ಲ. ಜೈನರು, ಸಿಖ್ಖರು, ಬೌದ್ಧರು ಹಿಂದೂ ವಿರೋಧಿಗಳಲ್ಲ ಎಂದಿದ್ದಾರೆ.

ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮ ಮಾನ್ಯತೆ ಸಿಗಬೇಕು. ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಲಿಂಗಾಯಿತ ಧರ್ಮದ ಒಳ ಪಂಗಡಗಳ ಬಗ್ಗೆ ಅಧ್ಯಯನ ನಡೆಯಬೆಕು ಎಂದು ಹೇಳಿದ್ದಾರೆ.


Related Articles

Back to top button