
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕ್ವಿಟ್ ಇಂಡಿಯಾ ಚಳವಳಿ ನೆನಪಿನ ದಿನ ದಸ್ಮರಣಾರ್ಥ ಬೆಳಗಾವಿಯ ಸ್ವಾತಂತ್ರ್ಯ ಸೈನಿಕ ಭವನದಲ್ಲಿ ಭಾನುವಾರ ಸ್ವಾತಂತ್ರ್ಯ ಹೋರಾಟಗಾರ, ಬೆಳಗಾವಿಯ ಸ್ವಾತಂತ್ರ್ಯ ಸೈನಿಕ ಭವನದ ಅಧ್ಯಕ್ಷ ರಾಜೇಂದ್ರ ಕಲಘಟಗಿ ಅವರನ್ನು ಸನ್ಮಾನಿಸಲಾಯಿತು.
99 ವರ್ಷದ 9 ತಿಂಗಳ ವಯಸ್ಸಿನ ಕಲಘಟಗಿ ಚಿಕ್ಕವಯಸ್ಸಿನಲ್ಲೇ ಬಿಟಿಷರ ವಿರುದ್ಧ ಹೋರಾಟ ಮಾಡಿದವರು. ಜುಲೈ 9 ಕ್ವಿಟ್ ಇಂಡಿಯಾ ಚಳವಳಿ ದಿನದಂದು ಅವರಿಗೆ ಸರ್ಕಾರದಿಂದ ಸತ್ಕಾರ ಏರ್ಪಡಿಸಲಾಗಿತ್ತು.


ಈ ಕಾರ್ಯಕ್ರಮದಲ್ಲಿ ಅರುಣ್ ಚಿವತೆ, ಸ್ವಾತಂತ್ರ್ಯ ಸೈನಿಕ ಭವನದ ಉಪಾಧ್ಯಕ್ಷರು, ಪರಶುರಾಮ್ ನಂದಿಹಳ್ಳಿ, ಸಂಜಯ್ ಪಾಟೀಲ್ ಜಯಂಟ್ಸ್ ಗ್ರೂಪ್ ಆಫ್ ಬೆಳಗಾವಿ ಹಾಗೂ ಇತರೆ ಸ್ವಾತಂತ್ರ್ಯಯೋಧರು ಹಾಗೂ ನಾಗರಿಕರು ಹಾಜರಿದ್ದರು.