Kannada NewsKarnataka NewsLatest

ಸವದತ್ತಿ ಯಲ್ಲಮ್ಮ: 20 ದಿನದಲ್ಲಿ 53.80 ಲಕ್ಷ ರೂ. ಕಾಣಿಕೆ

 ಪ್ರಗತಿವಾಹಿನಿ ಸುದ್ದಿ, ಸವದತ್ತಿ – ಕೇವಲ 20 ದಿನದಲ್ಲಿ ಸವದತ್ತಿ ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ 53.80 ಲಕ್ಷ ರೂ.ಕಾಣಿಕೆ ಸಂಗ್ರಹವಾಗಿದೆ.

ಕೊರೋನಾ ಹಿನ್ನೆಲೆಯಲ್ಲಿ ಸಾಲಿನಲ್ಲಿ ಕೇವಲ 20 ದಿನ ದೇವಸ್ಥಾನದ ಬಾಗಿಲು ತೆರೆಯಲಾಗಿತ್ತು. ಈ ಅಲ್ಪ ಅವಧಿಯಲ್ಲಿ ಇಷ್ಟು ದೊಡ್ಡ ಮೊತ್ತದ ಕಾಣಿಕೆ ಬಂದಿದೆ. 85 ಜನರು ಸೇರಿ ಕಾಣಿಕೆಯನ್ನು ಎಣಿಸಿದ್ದಾರೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೊಟಾರಗಸ್ತಿ ತಿಳಿಸಿದ್ದಾರೆ.

ಕಳೆದ ಮಾರ್ಚ್ ತಿಂಗಳಲ್ಲಿ ಕೊರೋನಾ ಆರಂಭವಾದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂದಿಸಲಾಗಿತ್ತು. ಜನೆವರಿ ಅಂತ್ಯದವರೆಗೂ ನಿರ್ಬಂದ ಮುಂದುವರಿದಿತ್ತು. ಫೆಬ್ರವರಿ 1ರಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಯಿತು. ಆದರೆ ಮತ್ತೆ ಮಹಾರ್ಷ್ಟ್ರದಲ್ಲಿ ಕೊರೋನಾ ಜೋರಾದ ಹಿನ್ನೆಲೆಯಲ್ಲಿ ಫೆ.20ರಿಂದ ದರ್ಶನ ನಿಲ್ಲಿಸಲಾಯಿತು.

ದೇವಸ್ಥಾನಕ್ಕೆ ಕರ್ನಾಟಕಕ್ಕಿಂತ ಹೆಚ್ಚಾಗಿ ಮಹಾರಾಷ್ಟ್ರದ ಭಕ್ತರು ಬರುತ್ತಾರೆ. ಪ್ರತಿ ವರ್ಷ ಸರಾಸರಿ 4 ಕೋಟಿ ರೂ. ಕಾಣಿಕೆ ಸಂಗ್ರಹವಾಗುತ್ತ ಬಂದಿದೆ.

Home add -Advt

 

Related Articles

Back to top button