
ಪ್ರಗತಿವಾಹಿನಿ ಸುದ್ದಿ: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ನಡೆಯುತ್ತಿದೆ. ಈ ದೇಶಗಳ ಯುದ್ಧದ ಮಧ್ಯೆ ಅನೇಕ ಭಾರತೀಯ ಸಿಲುಕಿಕೊಂಡಿದ್ದು, ಅವರನ್ನ ಸುರಕ್ಷಿತವಾಗಿ ಕರೆತರಲು ಕೇಂದ್ರ ಸರ್ಕಾರ ಅಪರೇಷನ್ ಸಿಂಧು ಜಾರಿ ಮಾಡಿದೆ.
ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿರುವರನ್ನು ಮರಳಿ ಕರೆತರುವ ನಿಟ್ಟಿನಲ್ಲಿ ಆಪರೇಷನ್ ಸಿಂಧು ಎನ್ನುವ ಯೋಜನೆಯನ್ನ ಮಾಡಿರುವುದಾಗಿ ಸರ್ಕಾರ ಹೇಳಿದ್ದು ಮೊದಲ ಹಂತದಲ್ಲಿ 110 ಭಾರತೀಯ ವಿದ್ಯಾರ್ಥಿಗಳನ್ನ ಉತ್ತರ ಇರಾನ್ನಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗ್ತಿದೆ. ಬಳಿಕ ಹಂತ ಹಂತವಾಗಿ ಇಸ್ರೇಲ್ ನಿಂದಲೂ ಭಾರತೀಯರನ್ನು ಏರ್ ಲಿಪ್ಟ್ ಮಾಡಲಾಗುತ್ತದೆ.
ಭಾರತೀಯರಿಗೆ ಯಾವುದೇ ತೊಂದರೆ ಆಗದಂತೆ ಕರೆತರಲಾಗುತ್ತದೆ. ಮೊದಲು ಹೆಚ್ಚು ಯುದ್ಧ ಪೀಡಿತ ಸ್ಥಳಗಳಿಂದ ಜನರನ್ನ ರಕ್ಷಿಸಲಾಗುತ್ತಿದ್ದು ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲಾಗುತ್ತದೆ. ಯಾರೂ ಭಯ ಪಡುವ ಅಗತ್ಯತೆ ಇಲ್ಲ ಎಂದು ಸರ್ಕಾರ ಭರವಸೆ ನೀಡಿದೆ.