Kannada NewsKarnataka News
ನಿಯತಿ ಫೌಂಡೇಶನ್ನಿಂದ ಅರಿಶಿಣ ಕುಂಕುಮ ಕಾರ್ಯಕ್ರಮ

ಪ್ರಗತಿ ವಾಹಿನಿ ಸುದ್ದಿ, ಖಾನಾಪುರ: ಖಾನಾಪುರ ತಾಲೂಕಿನ ಇಟಗಿಯಲ್ಲಿ ನಿಯತಿ ಫೌಂಡೇಶನ್ ವತಿಯಿಂದ ಅರಿಶಿಣ ಕುಂಕುಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಿಯತಿ ಫೌಂಡೇಶನ್ ಅಧ್ಯಕ್ಷೆ ಹಾಗೂ ಖಾನಾಪುರ ತಾಲೂಕಿನ ಬಿಜೆಪಿ ಮಹಿಳಾ ಮೋರ್ಚಾ ಪ್ರಭಾರಿ ಡಾ. ಸೋನಾಲಿ ಸರ್ನೋಬತ್ ಅವರು ಕಾರ್ಯಕ್ರಮ ಉದ್ಘಾಟಿಸಿ ಅರಿಶಿಣ ಕುಂಕುಮದ ಮಹತ್ವ ವಿವರಿಸಿದರು.
ಅಲ್ಲದೇ ಮಹಿಳೆಯರು ಸಂಘಟಿತರಾಗುವಂತೆ ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿಯ ಸ್ಥಳೀಯ ಮುಖಂಡರಾದ ಪ್ರಶಾಂತ ಸಾನಿಕೊಪ್ಪ, ಚಂದ್ರಕಾಂತ ಕೋಲ್ಕರ್,
ಬಾಳೇಶ ಚವ್ಹಾಣವರ್, ನಾಗೇಶ ರಾಮಾಜಿ, ಅನಿತಾ ಕೋಮಸ್ಕರ್, ಗಂಗೂತಾಯಿ ತಳವಾರ, ಕಾವ್ಯಾ ತಳವಾರ, ಇಟಗಿ ಗ್ರಾಮದ ಮಹಿಳಾ ಮುಖಂಡರು ಪಾಲ್ಗೊಂಡಿದ್ದರು.
Shocking News… ಬೆಳಗಾವಿ ಗಲಭೆ ಹುಬ್ಬಳ್ಳಿಗೆ ವರ!
https://pragati.taskdun.com/shocking-news-belgaum-riot-gift-to-hubli/




