Belagavi NewsBelgaum NewsKannada NewsKarnataka NewsNationalPolitics
*ದೇವಸ್ಥಾನ ಸಮಿತಿಗೆ 10 ಲಕ್ಷ ರೂ. ಚೆಕ್ ಹಸ್ತಾಂತರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೆಕೆ ಕೊಪ್ಪ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀ ಸಿದ್ದೇಶ್ವರ ದೇವಸ್ಥಾನದ ಕಟ್ಟಡ ಕಾಮಗಾರಿಯ 4ನೇ ಹಂತದ 10 ಲಕ್ಷ ರೂ,ಗಳ ಚೆಕ್ ನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ದೇವಸ್ಥಾನ ಕಮೀಟಿಯವರಿಗೆ ಹಸ್ತಾಂತರಿಸಿದರು.
ಸುಮಾರು 1 ಕೋಟಿ ರೂ,ಗಳ ವೆಚ್ಚದಲ್ಲಿ ದೇವಸ್ಥಾನ ಕಟ್ಟಡ ನಿರ್ಮಾಣಗೊಳ್ಳಲಿದೆ. ಸುಂದರ ದೇವಸ್ಥಾನ ನಿರ್ಮಾಣ ಮಾಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಈ ವೇಳೆ ಸಂತೋಷ ಕಂಬಿ, ಸಿದ್ರಾಯಿ ವಾಲಿ, ಅಯ್ಯಪ್ಪ ಮಾವಿನಕಟ್ಟಿ, ರಾಮಗೌಡ ಪಾಟೀಲ, ಅಪ್ಪು ನಂದಿ, ಅಪ್ಪಾಜಿ ಹನಿಮಟ್ಟಿ, ನಿಂಗಪ್ಪ ನಂದಿ, ಸುರೇಶ್ ಕಂಬಿ, ಗದಗಯ್ಯ ಹಿರೇಮಠ, ಚಂಬಯ್ಯ ಹಿರೇಮಠ, ಆನಂದ ದೊಡ್ಡತಮ್ಮನ್ನವರ್, ಸುರೇಶ ಹಂಪಣ್ಣವರ, ಸಿದ್ದು ಕಂಬಿ, ಬಸವರಾಜು ವಿಭೂತ್ತಿಮಠ, ಬಸವರಾಜ ಡೊoಗರಗಾವಿ, ಬಸವರಾಜ ತೊಲಗಿ, ಸುರೇಶ ಕುಡಿನಟ್ಟಿ, ಹಾಗೂ ಕೆ ಕೆ ಕೋಪ ಗ್ರಾಮದ ಸಮಸ್ತ ಗುರು ಹಿರಿಯರು ಹಾಗೂ ಸಿದ್ದೇಶ್ವರ ದೇವಸ್ಥಾನದ ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು.


