Kannada NewsKarnataka News

ಅಹವಾಲು ಆಲಿಸಿದ ಸಿಎಂ; ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಪ್ರವಾಹದಿಂದಾಗಿ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಸುಮಾರಿ 1260 ಮನೆಗಳು ಬಿದ್ದಿವೆ. ಸಾವಿರಾರು ಮನೆಗಳಿಗೆ ನೀರು ನುಗ್ಗಿತ್ತು. ಮನೆ ಕಳೆದುಕೊಂಡವರಿಗೆ ಸರಕಾರಿ 5 ಲಕ್ಷ ರೂ. ನೀಡುವುದಾಗಿ ಈಗಾಗಲೆ ಘೋಷಿಸಿದೆ. ಮೊದಲ ಕಂತಾಗಿ 1 ಲಕ್ಷ ರೂ. ನೀಡುತ್ತಿದೆ.

ದಕ್ಷಿಣ ಕ್ಷೇತ್ರದ ವಿನೋದ ಭಾಗ್ವತ್ ಕೂಡ ಪ್ರವಾಹದಿಂದಾಗಿ ಮನೆಯನ್ನು ಕಳೆದುಕೊಂಡಿದ್ದಾರೆ. ಬೆಳಗಾವಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ವಿನೋದ ಭಾಗ್ವತ ಅವರ ಮನೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು.

Home add -Advt

 

3 ಲಕ್ಷ ರೂ. ನೆರವು

ಇದೇ ವೇಳೆ, ಅನಾರೋಗ್ಯದಿಂದ ಬಳಲುತ್ತಿರುವ ಆರ್ಥಿಕವಾಗಿ ಬಡವರಾಗಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಮಂಜುನಾಥ ಹೊಸಮನಿ ಎನ್ನುವವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 3 ಲಕ್ಷ ರೂ. ಬಿಡುಗಡೆ ಮಾಡಲು ಆದೇಶಿಸಿದ್ದಾರೆ.

ಅಹವಾಲು ಸ್ವೀಕಾರ

ಮುಖ್ಯಮಂತ್ರಿ ಬಿ.ಸ್.ಯಡಿಯೂರಪ್ಪ ಇಂದು ಬೆಳಗ್ಗೆ ಬೆಳಗಾವಿಯ ಪ್ರವಾಸ ಮಂದಿರದ ಆವರಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ನೂರಾರು ಜನರು ಮುಖ್ಯಮಂತ್ರಿ ಬಳಿ ಸಮಸ್ಯೆಗಳನ್ನು ಹೇಳಿಕೊಂಡರು.

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕ ಅಭಯ ಪಾಟೀಲ, ಮಹಾದೇವಪ್ಪ ಯಾದವಾಡ ಸೇರಿದಂತೆ ಹಲವಾರು ಗಣ್ಯರು, ಅಧಿಕಾರಿಗಳು ಇದ್ದರು.

  

Related Articles

Back to top button