Latest

*ಲಿಫ್ಟ್ ಗಾಗಿ ತೆಗೆದಿದ್ದ ಹೊಂಡಕ್ಕೆ ಬಿದ್ದ ಮಗು; ದಾರುಣ ಸಾವು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಟ್ಟಡ ನಿರ್ಮಾಣದ ವೇಳೆ ಎಷ್ಟೇ ಜಾಗರೂಕರಾಗಿದ್ದರೂ ಕಡಿಮೆಯೇ. ಕಟ್ಟಡ ಲಿಫ್ಟ್ ಗೆಂದು ತೆಗೆದ ಗುಂಡಿಗೆ ಬಿದ್ದು ಪುಟ್ಟ ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನ ಸುಲ್ತಾನ್ ಪೇಟೆ ಬಳಿ ನಡೆದಿದೆ.

6 ವರ್ಷದ ಮಗು ಮಹೇಶ್ವರಿ ಮೃತ ಬಾಲಕಿ. ನಿರ್ಮಾಣ ಹಂತದ ಕಟ್ಟಡದಲ್ಲಿ ಆಟವಾಡುತ್ತಾ ಇದ್ದ ಮಗು ಏಕಾಏಕಿ ಲಿಫ್ಟ್ ಹೊಂದದಲ್ಲಿ ಬಿದ್ದಿದ್ದಾಳೆ. ತಕ್ಷಣ ಮಗು ರಕ್ಷಣೆಗೆ ಮುಂದಾದರೂ ಪ್ರಯೋಜನವಾಗಿಲ್ಲ.

ಕಟ್ಟಡ ಕಾಮಗಾರಿಗೆಂದು ಬಂದಿದ್ದ ದಂಪತಿ ಮಗು ದುರಂತದಲ್ಲಿ ಮೃತಪಟ್ಟಿದ್ದು, ದಂಪತಿ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಕೆ.ಆರ್.ಮಾರ್ಕೆಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

*ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಸೊಸೆ ಸೇರಿ ಇಬ್ಬರ ಬಂಧನ*

Home add -Advt

https://pragati.taskdun.com/bhatkalauttara-kannadamurder-casetwo-arrested/

Related Articles

Back to top button