Kannada NewsKarnataka NewsLatest
ಮನೆ ನಿರ್ಮಾಣ ಆದೇಶ ಪತ್ರ ಹಸ್ತಾಂತರ; ಸಂತ್ರಸ್ತರ ಮೊಗದಲ್ಲಿ ನಗು ತರಿಸಿದ ಶಾಸಕಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 2019ರ ಆಗಸ್ಟ್ ತಿಂಗಳಲ್ಲಿ ರಾಜ್ಯದಲ್ಲಿ ಉಂಟಾದ ನೆರೆಹಾವಳಿಯಿಂದ ಹಾನಿಗೀಡಾಗಿರುವ ಮನೆಗಳ ಪುನರ್ ನಿರ್ಮಾಣ ಹಾಗೂ ದುರಸ್ಥಿ ಕಾಮಗಾರಿಗಳ ಸಲುವಾಗಿ ಮಾವಿನಕಟ್ಟೆ ಗ್ರಾಮದ 15 ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ಹಸ್ತಾಂತರಿಸಲಾಯಿತು.

ಆದೇಶ ಪತ್ರ ಹಸ್ತಾಂತರದ ಸಂದರ್ಭದಲ್ಲಿ ಮಾವಿನಕಟ್ಟಿಯ ಹಿರಿಯರಾದ ಸಿದ್ರಾಮ ಗಡಾದ, ಉಳವಪ್ಪ ಮಲ್ಲಣ್ಣವರ, ಚನ್ನಪ್ಪ ಹಿರೇಹೊಳಿ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.