Latest

*ಮಾದಪ್ಪ ಸನ್ನಿಧಿ ನಾಗಮಲೆಗೆ ಹೊರಟ ಭಕ್ತ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ; ಹನೂರು: ದೇವರ ದರ್ಶನ ಪಡೆಯಲು ಕಾಡುಮೇಡು ಸುತ್ತುವ ಅನೇಕ ಮಂದಿಗಳಲ್ಲಿ ಕೆಲವರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ದೇವರ ಮೋರೆ ಹೊಗುವುದು ಸಾಮನ್ಯ. ಆದರೆ ಇಲ್ಲೊಬ್ಬ ಭಕ್ತ ದೇವರ ದರ್ಶನ ಪಡೆದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಕ್ಷೇತ್ರದ ನಾಗಮಲೆಗೆ ಚಾರಣದಲ್ಲಿ ನಡೆದಿದೆ. ಚಾರಣಕ್ಕೆ ಹೊರಟ ಸಂದರ್ಭದಲ್ಲಿ ಬಂಡೆಯ ಮೇಲಿಂದ ಜೀಗಿದು ವ್ಯಕ್ತಿ ಪ್ರಾಣವನ್ನು ಕಳೆದು ಕೊಂಡಿದ್ದಾರೆ ಎನ್ನಲಾಗಿದೆ .

ಮೃತ ವ್ಯಕ್ತಿ ಬೆಂಗಳೂರು ಸಿಟಿಯ ಕೆಂಗೆರಿಯ ಮಾರುತಿನಗರದವರು ಎಂದು ಗುರುತಿಸಲಾಗಿದೆ. ಹೆಸರು ಗುರುತು ಪತ್ತೆಯಾಗಿಲ್ಲ .ಸ್ಥಳಕ್ಕೆ ಬೇಟಿ ನೀಡಿದ ಮಹದೇಶ್ವರ ಬೆಟ್ಟ ಪೋಲಿಸ್ ಠಾಣೆಯ ಅಧಿಕಾರಿಗಳು ತಮಗೆ ಸಿಕ್ಕ ಅಪರಿಚಿತ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Home add -Advt

 

*ಡಿ.ರೂಪಾ, ರೋಹಿಣಿ ಸಿಂಧೂರಿಗೆ ನೋಟೀಸ್; ಸಿಎಂ ಖಡಕ್ ಸೂಚನೆ*

https://pragati.taskdun.com/d-rooparohini-sindhurics-noticecm-basavaraj-bommai/

Related Articles

Back to top button