Karnataka NewsLatestPolitics
*ಮಂಗಳೂರಿನಲ್ಲಿಂದು ಸಚಿವ ಸಂಪುಟ ಸಭೆ: ಡಿಸಿ ಕಚೇರಿವರೆಗೆ ತೆರೆದ ವಾಹನದಲ್ಲಿ ಸಾಗಿದ ಸಿಎಂ ಹಾಗೂ ಸಚಿವರು*

ಪ್ರಗತಿವಾಹಿನಿ ಸುದ್ದಿ: ಸಿಎಂ ಡಿ ಕೆ ಶಿವಕುಮಾರ್ ಅವರು ವಿಶೇಷ ಸಚಿವ ಸಂಪುಟ ಸಭೆಗೆ ಮಂಗಳೂರಿನ ಸರ್ಕಿಟ್ ಹೌಸ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಅಂಬಾರಿ ಬಸ್ (ತೆರೆದ ವಾಹನ) ಮೂಲಕ ಸಾಗಿದರು. ದಾರಿಯುದ್ದಕ್ಕೂ ಶಾಲಾ ವಿದ್ಯಾರ್ಥಿಗಳು ಹಾಗೂ ಕಲಾವಿದರ ತಂಡಗಳು ಪ್ರದರ್ಶನ ನಡೆಸಿ ಸರ್ಕಾರವನ್ನು ಸ್ವಾಗತಿಸಿದರು.
ಸಚಿವರಾದ ಯು ಟಿ ಖಾದರ್, ನರೇಂದ್ರ ಸ್ವಾಮಿ, ವಿಜಯಾನಂದ ಕಾಶಾಪ್ಪನವರ್ ಮತ್ತಿತರರು ಇದ್ದರು. ಇಂದು ಕಡಲನಗರಿ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಡೀ ರಾಜ್ಯ ಸರ್ಕಾರವೇ ಮಂಗಳೂರಿನಲ್ಲಿ ಬೀಡು ಬಿಟ್ಟಿದೆ.




