Karnataka News

*ಮಗುವಿನ ಮುಂದೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಅಪ್ಪ-ಅಮ್ಮ*

ಪ್ರಗತಿವಾಹಿನಿ ಸುದ್ದಿ: ಮೂರು ವರ್ಷದ ಮಗಳ ಮುಂದೆಯೇ ತಂದೆ-ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ತಾಲೂಕಿನ ಬೆಳವಿಗಿ ಗ್ರಾಮದ ಅಂಬೇಡ್ಕರ್ ನಗರದಲ್ಲಿ ನಡೆದಿದೆ.

ಹನುಮಂತ ಹೊನ್ನಪ್ಪನವರ (32) ಹಾಗೂ ಪತ್ನಿ ಸವಿತಾ ಹೊನ್ನಪ್ಪನವರ (26) ಆತ್ಮಹತ್ಯೆಗೆ ಶರನಾದ ದಂಪತಿ. ತಮ್ಮ 3 ವರ್ಷದ ಮಗಳು ಚೇತಾನಳ ಮುಂದೆಯೆ ನೇಣಿಗೆ ಕೊರಳೊಡ್ಡಿದ್ದಾರೆ.

Home add -Advt

ತಡರಾತ್ರಿ ಮಗು ವಿಪರೀತ ಅಳುತ್ತಿತ್ತು. ಮಗು ಅಳುವುದನ್ನು ಕೇಳಿ ಅಕ್ಕಪಕ್ಕದ ಮನೆಯವರು ಎಚ್ಚರಗೊಂಡಿದ್ದಾರೆ. ಮನೆಬಳಿ ಬಂದು ಕರೆದರೆ ಯಾರೂ ಬಾಗಿಲು ತೆರೆದಿಲ್ಲ. ಆದರೆ ಮಗು ಮಾತ್ರ ಅಳುತ್ತಲೇ ಇತ್ತು. ಅನುಮನಗೊಂಡ ನೆರೆಹೊರೆಯವರು ಮನೆಯ ಹೆಂಚು ತೆಗೆದು ನೋಡಿದ್ದಾರೆ. ಈ ವೇಳೆ ಮಗುವಿನ ಮುಂದೆಯೇ ತಂದೆ-ತಾಯಿ ನೇಣುಬಿಗಿದ ಸ್ಥಿತಿಯಲ್ಲಿಇ ಸಾವನ್ನಪ್ಪಿರುವುದು ಕಂಡುಬಂದಿದೆ.

ಕೆಳಗಿಳಿದು ಮಗುವನ್ನು ಎತ್ತಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದಂಪತಿ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಗುತ್ತಲ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ.

Related Articles

Back to top button