Belagavi NewsBelgaum News
*ಗೋಮಾಳ ಜಾಗಕ್ಕಾಗಿ ಗಲಾಟೆ: ಗುಡಿಸಲುಗಳಿಗೆ ಬೆಂಕಿ?*

ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ಗೋಮಾಳದ ಜಾಗಕ್ಕಾಗಿ ಗಲಾಟೆ ನಡೆದಿದ್ದು, ಗುಡಿಸಲುಗಳಿಗೆ ಬೆಂಕಿ ಹಚ್ಚಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೋಡದಲ್ಲಿ ನಡೆದಿದೆ.
ಬೆಂಕಿ ಕೆನ್ನಾಲಿಗೆಗೆ ಗುಡಿಸಲು ಸುಟ್ಟು ಕರಕಲಾಗಿದೆ.
ತಡರಾತ್ರಿ ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿದ್ದು, ಗುಡಿಸಲುಗಳು ಧಗಧಗನೆ ಹೊತ್ತಿ ಉರಿದಿದೆ.
ಹಾರೂಗೇರಿ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

