National

*ಗುರುದ್ವಾರದಲ್ಲಿ ಕೈಯ್ಯಾರೆ ಊಟ ಬಡಿಸಿದ ಪ್ರಧಾನಿ ಮೋದಿ*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಹಾರದ ಪಾಟ್ನಾದಲ್ಲಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ, ಇದೇ ವೇಳೆ ಗುರುದ್ವಾರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಸಿಖ್ಖರ ಪೇಟ ಧರಿಸಿ ನೂರಾರು ಮಂದಿಗೆ ಸ್ವತ: ಊಟ ಬಡಿಸಿ ಗಮನ ಸೆಳೆದಿದ್ದಾರೆ.

ನೆಲದ ಮೇಲೆ ಕುಳಿತಿರುವ ಸಿಖ್ ರಿಗೆ ಪ್ರಧಾನಿ ಮೋದಿ ಪ್ರಸದಾ ಬಡಿಸಿದರು. ಗುರು ಗೋವಿಂದ ಸಿಂಗ್ ಅವರ ಜನ್ಮ ಸ್ಥಳವಾಗಿ ಈ ಗುರುದ್ವಾರವನ್ನು 18ನೇ ಶತಮಾನದಲ್ಲಿ ಮಹಾರಾಜ ರಜತ್ ಸಿಂಗ್ ನಿರ್ಮಿಸಿದ್ದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಗುರುದ್ವಾರದಲ್ಲಿ ರೋಡ್ ಶೋ ನಡೆಸಿದ್ದಾರೆ. ಈ ವೇಳೆ ಬಿಹಾರ ಸಿಎಂ ನಿತೀಶ್ ಕುಮಾರ್, ಡಿಸಿಎಂ ಸಾಮ್ರಾಟ್ ಚೌಧರಿ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button