Latest

ನಾಳೆ ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ ಭಾರತ್ ಬ್ರ್ಯಾಂಡ್ ಯೂರಿಯಾ ಗೊಬ್ಬರ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ‘ಒಂದು ರಾಷ್ಟ್ರ, ಒಂದು ರಸಗೊಬ್ಬರ’ ಯೋಜನೆಯ ಭಾಗವಾಗಿ ‘ಭಾರತ್’ ಎಂಬ ಏಕ್ ಬ್ರಾಂಡ್‌ನಡಿ ಸಬ್ಸಿಡಿ ಸಹಿತ ಯೂರಿಯಾ ಚೀಲಗಳನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬಿಡುಗಡೆ ಮಾಡಲಿದ್ದಾರೆ.

ಫಲಾನುಭವಿ ರೈತರಿಗೆ 16,000 ಕೋಟಿ ರೂ.ಗಳ 12 ನೇ ಕಂತಿನ ಬಿಡುಗಡೆ ಮತ್ತು 600 ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಸಮ್ಮೇಳನ 2022 ರ ಭಾಗವಾಗಿ, ಕೃಷಿ ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರ ಸಚಿವಾಲಯಗಳು ಜಂಟಿಯಾಗಿ ಆಯೋಜಿಸಿದ ಕಾರ್ಯಕ್ರಮ ಇದಾಗಿದೆ.

Home add -Advt

ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಎಲ್ಲಾ ಸಬ್ಸಿಡಿ ಮಣ್ಣಿನ ಪೋಷಕಾಂಶಗಳಾದ ಯೂರಿಯಾ, ಡೈಅಮೋನಿಯಂ ಫಾಸ್ಫೇಟ್, ಮ್ಯೂರಿಯೇಟ್ ಆಫ್ ಪೊಟ್ಯಾಶ್ ಮತ್ತು ಎನ್‌ಪಿಕೆಗಳನ್ನು ರಾಷ್ಟ್ರದಾದ್ಯಂತ ‘ಭಾರತ್’ ಅಡಿಯಲ್ಲಿ ಮಾರಾಟ ಮಾಡಲಾಗುವುದು ಎಂದು ಹೇಳಿದರು.

ಅಧಿಕಾರಿಗಳ ಪ್ರಕಾರ, 177 ರಸಗೊಬ್ಬರ ತಯಾರಕರು ತಮ್ಮ ಉತ್ಪನ್ನಗಳನ್ನು ಒಂದೇ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಲಿದ್ದಾರೆ. ಇದಲ್ಲದೆ, ಪ್ರಧಾನಮಂತ್ರಿ ಅವರು ಕಾರ್ಯಕ್ರಮದಲ್ಲಿ ‘ಅಗ್ರಿ ಸ್ಟಾರ್ಟ್ಅಪ್ ಕಾನ್ಕ್ಲೇವ್ ಮತ್ತು ಪ್ರದರ್ಶನ’ ಉದ್ಘಾಟಿಸಲಿದ್ದಾರೆ, ಇದರಲ್ಲಿ 1,500 ಕೃಷಿ- ಸ್ಟಾರ್ಟ್‌ಅಪ್‌ಗಳು ಭಾಗವಹಿಸುವ ಮತ್ತು ತಾಂತ್ರಿಕ ಅಧಿವೇಶನಗಳನ್ನು ನಡೆಸುವ ನಿರೀಕ್ಷೆಯಿದೆ.

ಸುಮಾರು 300 ಸ್ಟಾರ್ಟ್‌ಅಪ್‌ಗಳು ನಿಖರವಾದ ಕೃಷಿ, ಕೊಯ್ಲಿನ ನಂತರದ ಮತ್ತು ಮೌಲ್ಯವರ್ಧನೆ ಪರಿಹಾರಗಳು, ಸಣ್ಣ ರೈತರಿಗೆ ಯಾಂತ್ರೀಕರಣ, ಕೃಷಿ-ಲಾಜಿಸ್ಟಿಕ್ಸ್‌ಗೆ ಸಂಬಂಧಿಸಿದ ತಮ್ಮ ಆವಿಷ್ಕಾರಗಳನ್ನು ಮೊದಲ ದಿನ ಪ್ರದರ್ಶಿಸಲಿವೆ.

ತಮಿಳುನಾಡಿನಲ್ಲಿ ಹಿಂದಿ ಹೇರಿದರೆ ದೆಹಲಿಯಲ್ಲಿ ಪ್ರತಿಭಟನೆ; ಡಿಎಂಕೆ ಎಚ್ಚರಿಕೆ

Related Articles

Back to top button