Latest

*ಪ್ರವಾಸಿ ಮಂದಿರದಲ್ಲಿಯೇ ಆತ್ಮಹತ್ಯೆಗೆ ಶರಣಾದ PWD ಅಧಿಕಾರಿ*

ಪ್ರಗತಿವಾಹಿನಿ ಸುದ್ದಿ; ನೆಲಮಂಗಲ: ಕಚೇರಿಗೆ ಸಂಬಂಧಿಸಿದ ಫೈಲ್ ಕಾಣೆಯಾಗಿದೆ ಎಂಬ ಕಾರಣಕ್ಕೆ ಪ್ರವಾಸಿ ಮಂದಿರದಲ್ಲಿಯೇ ಪಿಡಬ್ಲ್ಯುಡಿ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.

ಲಕ್ಷ್ಮಿನರಸಿಂಹಯ್ಯ (56) ಮೃತ ಅಧಿಕಾರಿ. ನೆಲಮಂಗಲದ ಶಿವಗಂಗೆಯ ಪ್ರವಾಸಿ ಮಂದಿರದಲ್ಲಿ ಲಕ್ಷ್ಮಿನರಸಿಂಹಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Home add -Advt

ತುಮಕೂರು ಜಿಲ್ಲೆಯ ಮಧುಗಿರಿ ನಿವಾಸಿಯಾಗಿರುವ ಲಕ್ಷ್ಮಿನರಸಿಂಹಯ್ಯ, ಹಲವು ವರ್ಷಗಳಿಂದ ಮಧುಗಿರಿ ಪಿಡ್ಬ್ಲುಡಿದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕಚೇರಿಗೆ ಸಂಬಂಧಿಸಿದ ಫೈಲ್ ಮಿಸ್ಸಾಗಿದ್ದಂಕ್ಕೆ ಇತ್ತೀಚೆಗೆ ಆತಂಕಕ್ಕೀಡಾಗಿದ್ದರು. ಈ ಬಗ್ಗೆ ಕುಟುಂಬದವರ ಜೊತೆಗೂ ಮಾತನಾಡಿದ್ದರು.

ಇದೀಗ ಶಿವಗಂಗೆಯ ಪ್ರವಾಸಿ ಮಂದಿರದಲ್ಲಿ ಅಧಿಕಾರಿ ಲಕ್ಷ್ಮಿನರಸಿಂಹಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ದಾಬಸ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

*ಸಾಕ್ಷಾತ್ಕಾರ ಸಿನಿಮಾ ಖ್ಯಾತಿಯ ನಟಿ ಜಮುನಾ ನಿಧನ*

https://pragati.taskdun.com/jamunano-moresakshatkara-actress/

Related Articles

Back to top button