Latest

ರಾಜೀವ್ ಗಾಂಧಿ ಹಂತಕರು ಜೈಲಿನಿಂದ ರಿಲೀಸ್

ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳನ್ನು ತಮಿಳುನಾಡಿನ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. 31 ವರ್ಷಗಳ ಜೈಲುವಾಸದ ಬಳಿಕ ಎಲ್ಲಾ 6 ದೋಷಿಗಳಿಗಳನ್ನು ಬಂಧಮುಕ್ತಗೊಳಿಸಲಾಗಿದೆ.

ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ವೆಲ್ಲೂರು ಜೈಲಿನಿಂದ ಪ್ರಮುಖ ಅಪರಾಧಿ ನಳಿನಿ ಶ್ರೀಹರನ್, ರವಿಚಂದ್ರನ್, ಸಂತನ್, ಮುರುಗನ್, ಜೈಕುಮಾರ್, ರಾಬರ್ಟ್ ಪೈಸ್ ಸೇರಿದಂತೆ ಎಲ್ಲಾ 6 ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿದೆ.

1991ರಲ್ಲಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಳಿನಿ, ಶ್ರೀಹರನ್ ರವಿಚಂದ್ರನ್, ಸಂತನ್, ಮುರುಗನ್, ಜೈಕುಮಾರ್, ರಾಬರ್ಟ್ ಪೈಸ್ ಜೈಲುಪಾಲಾಗಿದ್ದರು.31 ವರ್ಷ ಜೈಲುವಾಸ ಅನುಭವಿಸಿದ್ದ ಅಪರಾಧಿಗಳು ತೃಪ್ತಿದಾಯಕ ನಡವಳಿಕೆ ತೋರಿದ್ದಾರೆ. ಪದವಿ ವ್ಯಾಸಂಗ ಪಡೆದು, ಪುಸ್ತಕಗಳನ್ನು ಬರೆದಿದ್ದಾರೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.

ವೈದ್ಯ ವಿಜ್ಞಾನದಲ್ಲಿ ಸದಾ ಹೊಸತು ಇರಬೇಕು: ಡಾ. ಕೋರೆ

Home add -Advt

https://pragati.taskdun.com/latest/cuticon-202213th-indian-conference-of-dermatologistsdr-prabhakara-kore/

Related Articles

Back to top button