
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಮಜನ್ಮಭೂಮಿ ಶ್ರೀ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನದ ರಸೀದಿ ಪುಸ್ತಕ ಪೂಜಾ ಕಾರ್ಯಕ್ರಮ ಶಾಹುನಗರದ ಮಹದೇವ ಮಂದಿರದಲ್ಲಿ ಸೋಮವಾರ ನಡೆಯಿತು.

ಹಿರಿಯ ಸ್ವಯಂಸೇವಕರುಗಳ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶಾಸಕ ಅನಿಲ ಬೆನಕೆ, ಪರಮೇಶ್ವರ ಹೆಗಡೆ, ಅಶೋಕ ಶಿಂತ್ರೆ, ಕೃಷ್ಣ ಭಟ್, ಶ್ರೀಕಾಂತ ಕದಂ, ವಿಜಯ ಜಾಧವ, ವಾಣಿ ರಮೇಶ್, ಸತೀಶ್ ಮಾಳೋದೆ,ಅನೂಪ್ ಕಾಟೆ, ಬಸವರಾಜ ಹಳಿಂಗಳಿ, ಶಿವಬಸಪ್ಪ ಬಾವಿ, ಸಚಿನ್ ಸಬನೀಸ್ ಮೊದಲಾದವರು ಭಾಗವಹಿಸಿದ್ದರು.