Karnataka News

*ಕಾಫಿ ಬೀಜ ಕದ್ದನೆಂದು ಶೂಟ್ ಮಾಡಿದ ಸೆಕ್ಯೂರಿಟಿ*

ಪ್ರಗತಿವಾಹಿನಿ ಸುದ್ದಿ: ಕಾಫಿ ಬೀಜ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಯುವಕನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಕೊಡಗು ಜಿಲ್ಲೆಯ ಚೆಂಬೆಬೆಳ್ಳೂರಿನಲ್ಲಿ ನಡೆದಿದೆ. 

ಪೊನ್ನು (23) ಕೊಲೆಯಾದ ವ್ಯಕ್ತಿ ಹಾಗೂ ವಿರಾಜಪೇಟೆ ಎಸ್‌ಬಿಐ ಬ್ಯಾಂಕ್ ಶಾಖೆಯ ಗನ್ ಮ್ಯಾನ್ ಚಿಣ್ಣಪ್ಪ ಆರೋಪಿ. ಪೊನ್ನು ಕಾಫಿ ಬೀಜವನ್ನು ಕದ್ದಿದ್ದಾನೆ ಎಂದು ಆರೋಪಿಸಿ ಚಿಣ್ಣಪ್ಪ ಗುಂಡಿಕ್ಕಿದ್ದಾನೆ. ಘಟನೆ ಹಿನ್ನೆಲೆಯಲ್ಲಿ ಪೊನ್ನು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

Home add -Advt

ಘಟನೆಗೆ ಸಂಬಂಧಿಸಿ ಪೊನ್ನುವಿನ ಮೃತದೇಹವನ್ನು ಕೊಡಗು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related Articles

Back to top button