Kannada NewsKarnataka NewsLatest

ಶಿವಚರಿತ್ರೆ ಇನ್ನು 3 ತಿಂಗಳಲ್ಲಿ ರೆಡಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಇಲ್ಲಿಯ ಶಿವಜಿ ಗಾರ್ಡನ್ ನಲ್ಲಿ ಶಾಸಕ ಅಭಯ ಪಾಟೀಲ ಅವರ ಯೋಜನೆಯಂತೆ ನಿರ್ಮಾಣವಾಗುತ್ತಿರುವ ಶಿವಚರಿತ್ರೆ ದೃಷ್ಯಾವಳಿ ಬರುವ ಅಕ್ಟೋಬರ್ ಅಥವಾ ನವೆಂಬರ್ ಹೊತ್ತಿಗೆ ಉದ್ಘಾಟನೆಯಾಗಲಿದೆ.

7  ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಈವರೆಗೆ 6 ಕೋಟಿ ರೂ. ವೆಚ್ಚವಾಗಿದೆ. ನಗರಾಭಿವೃದಧಿ ಪ್ರಾಧಿಕಾರ ಮತ್ತು ಶಾಸಕರ ನಿಧಿ ಬಳಸಲಾಗಿದೆ. ಕಡಿಮೆ ಬಿದ್ದಿದ್ದ ಒಂದು ಕೋಟಿ ರೂ. ಈಗ ಮಂಜೂರಾಗಿದೆ.

ಎಂಇಎಸ್ ನ ಕೆಲವು ನಾಯಕರ ಕುತಂತ್ರದಿಂದ ಹಲವು ಅಡ್ಡಿಗಳುಂಟಾದರೂ ಅಭಯ ಪಾಟೀಲ ನಿರಂತರ ಪ್ರಯತ್ನದಿಂದ ಯೋಜನೆ ಜಾರಿಗೊಳಿಸುತ್ತಿದ್ದಾರೆ. ಕಳೆದ ಅವಧಿಯಲ್ಲಿ ಅವರು ಶಾಸಕತ್ವ ಕಳೆದುಕೊಂಡಿದ್ದರಿಂದ ಯೋಜನೆ ವಿಳಂಬವಾಗಿದೆ.

Home add -Advt

ಕನ್ನಡ ಮತ್ತು ಮರಾಠಿ ಭಾಷೆಗಳೆರಡರಲ್ಲೂ ಧ್ವನಿ ರೂಪಿಸಲಾಗುತ್ತಿದೆ. ಸುಂದರವಾದ ಲೈಟಿಂಗ್ ಸಿಸ್ಟಂ ಅಳವಡಿಸಲಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button