LatestWorld

*150 ಅಡಿಗೂ ಅಧಿಕ ಆಳದ ಕಂದಕಕ್ಕೆ ಉರುಳಿದ ಬಸ್*

ಪ್ರಗತಿವಾಹಿನಿ ಸುದ್ದಿ: ಪಶ್ಚಿಮ ಬಂಗಾಳ-ಸಿಕ್ಕಿಂ ಗಡಿ ಪ್ರದೇಶದ ತೀಸ್ತಾ ನದಿ ತೀರದಲ್ಲಿ ಈ ಬಸ್ 150 ಅಡಿಗೂ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ  ಕನಿಷ್ಠ 6 ಮಂದಿ ಮೃತಪಟ್ಟು 15 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. 

ಪೊಲೀಸರು ಮತ್ತು ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಹೊರಕ್ಕೆಳೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿರುವುದಾಗಿ ಕಲಿಂಪಾಗ್ ಜಿಲ್ಲೆಯ ಎಸ್‌ಪಿ ಶ್ರೀಹರಿ ಪಾಂಡೆ ತಿಳಿಸಿದ್ದಾರೆ.

Home add -Advt

ಅಪಘಾತಕ್ಕೊಳಗಾದ ಖಾಸಗಿ ಬಸ್ ಗ್ಯಾಂಗ್ಟಕ್ ಮತ್ತು ಸಿಲಿಗುರಿ ನಡುವೆ ಸಂಚರಿಸುತ್ತಿತ್ತು. ಅಪಘಾತಕ್ಕೆ ಕಾರಣ ಏನೆಂದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Related Articles

Back to top button